Select Your Language

Notifications

webdunia
webdunia
webdunia
webdunia

ಕೊರೊನಾ ವೈರಸ್ ತೊಲಗಿಸಲು ಘೋರ ಕೃತ್ಯ ಎಸಗಿದ ಅರ್ಚಕ

ಕೊರೊನಾ ವೈರಸ್ ತೊಲಗಿಸಲು ಘೋರ ಕೃತ್ಯ ಎಸಗಿದ  ಅರ್ಚಕ
ಭುವನೇಶ್ವರ , ಶುಕ್ರವಾರ, 29 ಮೇ 2020 (08:08 IST)
ಭುವನೇಶ್ವರ : ಕೊರೊನಾ ವೈರಸ್ ಓಡಿಸಲು ಅರ್ಚಕನೊಬ್ಬ  ದೇವರಿಗೆ ನರ ಬಲಿ ನೀಡಿದ ಘಟನೆ ಒಡಿಶಾದ ಕಟಕ್ ಜಿಲ್ಲೆಯ ನರಸಿಂಗ್ ಪುರದ ಬಂಧಾಹೂಡಾದ ಬಳಿಯ ಬಂಧಾ ಮಾ ಬುಧ ಬ್ರಾಹ್ಮಿಣಿ ದಿ ದೇವಸ್ಥಾನದಲ್ಲಿ ನಡೆದಿದೆ.


ಅಲ್ಲಿನ ಅರ್ಚಕನಾದ ಸನ್ಸಾರಿ ಓಝಾ(72) ಇಂತಹ ಕೃತ್ಯ ಎಸಗಿದ ಆರೋಪಿಯಾಗಿದ್ದು, ಸರೋಜ್ ಕುಮಾರ್ ಪ್ರಧಾನ್(52) ಮೃತಪಟ್ಟ ವ್ಯಕ್ತಿ. ಆರೋಪಿಗೆ ಕನಸಿನಲ್ಲಿ ದೇವರು ಬಂದು ನರ ಬಲಿ ಕೇಳಿದ ಕಾರಣದಿಂದ ಆತ ಸ್ಥಳೀಯ ವ್ಯಕ್ತಿಯ ರುಂಡವನ್ನು ಕತ್ತರಿಸಿ ಪೂಜೆ ಸಲ್ಲಿಸಿದ್ದಾನೆ. ಬಳಿಕ ಆತ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ.


ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಅರ್ಚಕ ಒಬ್ಬ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ 4 ರವರೆಗೆ ಡೇಂಜರ್