Webdunia - Bharat's app for daily news and videos

Install App

ಪಾರ್ಟಿ ನೀಡಿ ವಿಚ್ಛೇಧನವನ್ನು ಸಂಭ್ರಮಿಸಿ, ಮಾಜಿ ಪತ್ನಿಯ ಆಕೃತಿ ಜತೆಗೆ ಫೋಸ್ ಕೊಟ್ಟ ವ್ಯಕ್ತಿ

Sampriya
ಶುಕ್ರವಾರ, 13 ಡಿಸೆಂಬರ್ 2024 (20:01 IST)
Photo Courtesy X
ಹರಿಯಾಣ: ಹೆಚ್ಚಾಗಿ ಸಾಮಾನ್ಯ ವ್ಯಕ್ತಿಗಳು ತಮ್ಮ ವಿಚ್ಛೇಧನದ ಸುದ್ದಿಯನ್ನು ಖಾಸಗಿಯಾಗಿ ಇಡಲು ಬಯಸುತ್ತಾರೆ. ಆದರೆ ಹರಿಯಾಣದ ವ್ಯಕ್ತಿಯೊಬ್ಬ ವಿಚ್ಛೇಧನದ ಸುದ್ದಿಯನ್ನು ಸಂಭ್ರಮಿಸುವ ಮೂಲಕ ದೇಶದಾದ್ಯಂತ ಸುದ್ದಿಗೆ ಕಾರಣವಾಗಿದ್ದಾನೆ.  

ಹರಿಯಾಣದ ವ್ಯಕ್ತಿಯೊಬ್ಬರು ವಿಚ್ಛೇದನದ ಸಲುವಾಗಿ ದೊಡ್ಡ ಮಟ್ಟದಲ್ಲಿ ಪಾರ್ಟಿ ಆಯೋಜಿಸಿ ಸಂಭ್ರಮಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಅದಲ್ಲದೆ ಇದರ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದೆ.

ಹರ್ಯಾಣದ ನಿವಾಸಿ ಮಂಜೀತ್ ಅವರು 2020 ರಲ್ಲಿ ಕೋಮಲ್ ಎಂಬಾಕೆಯನ್ನು ಮದುವೆಯಾದರು. ಆದರೆ ಈ ಜೋಡಿ ಮಧ್ಯೆ ಕಾಣಿಸಿಕೊಂಡ ಭಿನ್ನಾಭಿಪ್ರಾಯದಿಂದ ಮೂರು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಮಾಡಲು ಬಯಸಿದರು. ಅದರಂತೆ ವಿಚ್ಛೇಧನದ ಮೂಲಕ ಅವರ ದಾಂಪತ್ಯ ಜೀವನ ಕೊನೆಗೊಂಡಿತು.

ತಮ್ಮ ಬೇರ್ಪಡುವಿಕೆಯನ್ನು ಖಾಸಗಿಯಾಗಿ ಇರಿಸಿಕೊಳ್ಳಲು ಇಷ್ಟಪಡುವ ಅನೇಕರಿಗಿಂತ ಭಿನ್ನವಾಗಿ, ಮಂಜೀತ್ ಈ ಸಂದರ್ಭವನ್ನು ದೊಡ್ಡ ಮಟ್ಟದಲ್ಲಿ ಆಚರಣೆಯೊಂದಿಗೆ ಗುರುತಿಸಲು ನಿರ್ಧರಿಸಿದರು.

ಪಾರ್ಟಿಯಲ್ಲಿ ಮಂಜೀತ್ ಮತ್ತು ಕೋಮಲ್ ಅವರ ಮದುವೆಯ ಫೋಟೋ, ಅವರ ಮದುವೆ ಮತ್ತು ವಿಚ್ಛೇದನದ ದಿನಾಂಕಗಳನ್ನು ಪ್ರಮುಖವಾಗಿ ಪ್ರದರ್ಶಿಸುವ ಪೋಸ್ಟರ್ ಹಾಕಿ, ಸಂಭ್ರಮಿಸಿಲಾಯಿತು. ಸ್ವಾತಂತ್ರ್ಯನಾಗಿದ್ದೇನೆ ಎಂದು ಜೋರಾಗಿ ಕೂಗಿ ಅನೇಕ ಕೇಕ್‌ಗಳನ್ನು ಕಟ್ಟಿ ಮಾಡಿ ಸಂಭ್ರಮಿಸಿದ್ದಾನೆ.

ಅದಲ್ಲದೆ ಹೆಣ್ಣಿನ ಆಕೃತಿಯ ಒಂದು ಗೊಂಬೆಯನ್ನು ಮಾಡಿ ಅದರ ಜತೆ ಪೋಸ್ ನೀಡಿದ್ದಾನೆ. ಈ ಫೋಟೋ, ವಿಡಿಯೋ ಭಾರೀ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಮುಂದಿನ ಸುದ್ದಿ
Show comments