Webdunia - Bharat's app for daily news and videos

Install App

9ರ ಬಾಲಕಿ ಮೇಲೆ ಸ್ಮಶಾನದಲ್ಲಿ ಅತ್ಯಾಚಾರ!

Webdunia
ಮಂಗಳವಾರ, 3 ಆಗಸ್ಟ್ 2021 (08:39 IST)
ದೆಹಲಿ(ಆ.02): ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ ಪ್ರಕರಣ ಯಾರೂ ಮರೆತಿಲ್ಲ. ಇದಾದ ಬಳಿಕ ಅದೆಷ್ಟೇ ಸುರಕ್ಷತೆ ಒದಗಿಸಿದರೂ, ಜಾಗೃತಿ ಮೂಡಿಸಿದರೂ ಅತ್ಯಾಚಾರ ಪ್ರಕರಣಗಳು ನಿಂತಿಲ್ಲ. ಇದೀಗ ದೆಹಲಿಯ ಕಂಟ್ಮೋನ್ಮೆಂಟ್ ಏರಿಯಾ ನಂಗಲ್ನಲ್ಲ ನಡೆದಿದೆ. 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲ್ಲಲಾಗಿದೆ. ಬಳಿಕ ಶವನ್ನು ಸ್ಮಶಾನದಲ್ಲಿ ಸುಟ್ಟುಹಾಕಿದ ಘಟನೆ ನಡೆದಿದೆ.

•ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ
•9 ವರ್ಷದ ಬಾಲಕಿ ಮೇಲೆ ರೇಪ್ & ಮರ್ಡರ್
•ಸ್ಮಶಾನದಲ್ಲಿರುವ ಗುರು ವಿರುದ್ಧ ದೂರು ದಾಖಲಿಸಿದ ಪೋಷಕರು
ನಂಗಲ್ನ ಸ್ಮಶಾನದ ಬಳಿ ವಾಸವಿರುವ 9ರ ಬಾಲಕಿ ಹಾಗೂ ಪೋಷಕರು ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಸಂಜೆ 6 ಗಂಟೆ ವೇಳೆ ಬಾಲಕಿ ಸ್ಮಶಾನದಲ್ಲಿ ಇಟ್ಟಿರುವ ರೆಫ್ರಿಜರೇಟರ್ನಲ್ಲಿ ತಣ್ಣನೆ ನೀರು ಕುಡಿಯಲು ತೆರಳಿದ್ದಾರೆ. ಆದರೆ ಎಷ್ಟು ಹೊತ್ತಾದರು ಬಾಲಕಿ ಮನೆಗೆ ಹಿಂತಿರುಗಿಲ್ಲ. ಆತಂಕ ಗೊಂಡ ಪೋಷಕರು ಹುಡುಕಾಟಕ್ಕೆ ಇಳಿದ್ದಾರೆ.
 ಈ ವೇಳೆ ಪರಿಸ್ಥಿತಿ ಕೈಮೀರುತ್ತಿದೆ ಎಂದು ಅರಿತ ಸ್ಮಶಾನದಲ್ಲಿ ಅಂತಿ ವಿಧಿವಿಧಾನಗಳನ್ನು ನೇರವೇರಿಸಲು ನೇಮಕಗೊಂಡಿರುವ  ಗುರು ಬಾಲಕಿ ಪೋಷಕರನ್ನು ಕರೆಯಿಸಿದ್ದಾನೆ. ಬಳಿಕ ಬಾಲಕಿ ಮೃತ ದೇಹ ತೋರಿಸಿ, ತಕ್ಷಣವೇ ಸುಡಲು ಧಮ್ಕಿ ಹಾಕಿದ್ದಾನೆ. ಪೊಲೀಸರು ಬಂದರೆ ಮರಣೋತ್ತರ ಪರೀಕ್ಷೆ ಮಾಡಿ, ಅಂಗಾಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಮುಂದಿನ ಜನ್ಮದಲ್ಲಿ ಅಂಗಾಂಗ ವೈಕಲ್ಯ ಎದುರಾಗಲಿದೆ ಎಂದು ಬೆದರಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಪೋಷಕರನ್ನು ಬೆದರಿಸಿ ಸ್ಮಶಾನದ ಗುರು ಸ್ಮಶಾನದಲ್ಲೇ ಬಾಲಕಿ ಶವ ಸುಟ್ಟಿದ್ದಾನೆ. ಇತ್ತ ಪೋಷಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕಾಗಿಮಿಸದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಶವ ಸುಟ್ಟ ಗುರು ಪರಾರಿಯಾಗಿದ್ದಾನೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ನಂಗಲ್ ನಿವಾಸಿಗಳು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಲಕಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಾರೆ. ಇತ್ತ ಬಾಲಕಿಯನ್ನು ಕಳೆದುಕೊಂಡ ಪೋಷಕರ ಅಳಲು ಮುಗಿಲು ಮುಟ್ಟಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋಸ್ಟ್ ವಾಂಟೆಡ್‌ ಗ್ಯಾಂಗ್‌ಸ್ಟರ್‌ ರೂಮಿ ವೊಗ್ರಾ ಎನ್‌ಕೌಂಟರ್‌ನಲ್ಲಿ ಸಾವು

ಸಿದ್ದರಾಮಯ್ಯನವರೇ ಯಾವುದೇ ಕಾರಣಕ್ಕೂ ಡಿಕೆಶಿ ಕೈಗೆ ಕರ್ನಾಟಕವನ್ನು ನೀಡಬೇಡಿ: ಬಸನಗೌಡ ಪಾಟೀಲ್

ಕುಮಾರಸ್ವಾಮಿ ಪತ್ರಕ್ಕೆ ಸಿಕ್ತು ಕೇಂದ್ರದಿಂದ ಸ್ಪಂದನೆ: ಮಾವು ಬೆಳೆಗಾರರಿಗೆ ಗುಡ್‌ನ್ಯೂಸ್‌

ವಾಟ್ಸಾಪ್‌ ಸ್ಟೇಟಸ್‌ಗೆ ರೀಲ್ಸ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಿಯಕರ ಕಿರಿಕಿರಿ: ಯುವತಿ ಸಾವಿಗೆ ಶರಣು

ರೈಲ್ವೆ ಪ್ರಯಾಣಿಕರಿಗೆ ಬಿಗ್ ಶಾಕ್‌: ಜುಲೈ 1ರಿಂದ ಟಿಕೆಟ್ ದರದಲ್ಲಿ ಹೆಚ್ಚಳ

ಮುಂದಿನ ಸುದ್ದಿ
Show comments