Select Your Language

Notifications

webdunia
webdunia
webdunia
webdunia

11 years for Modi Govt: ಏನೂ ಮಾಡಿಲ್ಲ ಪ್ರಚಾರದಿಂದಲೇ ಬದುಕಿರೋದು ಎಂದ ಸಿದ್ದರಾಮಯ್ಯ

Siddaramaiah

Krishnaveni K

ಬೆಂಗಳೂರು , ಸೋಮವಾರ, 9 ಜೂನ್ 2025 (11:58 IST)
ಬೆಂಗಳೂರು: ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 11 ವರ್ಷವಾಗಿದೆ. ಈ ಬಗ್ಗೆ ಮಾಧ್ಯಮಗಳು ಇಂದು ಸಿಎಂ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಕೇಳಿದಾಗ ಅವರು ಕೇವಲ ಪ್ರಚಾರದಿಂದಲೇ ಬದುಕಿರೋದು, ಬೇರೆ ಏನೂ ಮಾಡಿಲ್ಲ ಎಂದಿದ್ದಾರೆ.

ಮೋದಿ ಸರ್ಕಾರದ ಬಗ್ಗೆ ನೀವು ಏನು ಹೇಳ್ತೀರಿ, ಎಂದರೆ ನಾನೇನು ಹೇಳಬೇಕು ಇದರ ಬಗ್ಗೆ ಎಂದ ಸಿದ್ದರಾಮಯ್ಯ ಬಳಿಕ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಅದಕ್ಕೆ ನಾನೇನು ಹೇಳ್ಳಿ? ಮೋದಿ ಇದ್ದಾರಲ್ಲಾ ಅವರು ಪ್ರಚಾರದಿಂದ ಬದುಕಿರೋದು. ಬರೀ ಪ್ರಚಾರ. ನೋಟು ನಿಷೇಧ ಮಾಡಿದ್ರು ಏನಾಯ್ತು? ಯಾರಿಗೆ ಅನುಕೂಲ ಆಯ್ತು? ಅಚ್ಚಾ ದಿನ್ ಆಯೇಗಾ ಎಂದ್ರು ಏನಾಯ್ತು? ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡ್ತೀವಿ ಎಂದವ್ರು ಏನಾಯ್ತಪ್ಪಾ? ಆಮೇಲೆ ರೈತರ ಸಮಸ್ಯೆ ಬಗೆಹರಿಸ್ತೀವಿ ಎಂದ್ರು ಏನಾಯ್ತು? ರೈತರು ಯಾಕೆ ಚಳವಳಿ ಮಾಡಿದ್ರು ಒಂದು ವರ್ಷ. ಅವರು ಏನು ಹೇಳಿದ್ರೂ ಮೇಜರ್ ಆಗಿ ಒಂದನ್ನೂ ಮಾಡಿಲ್ಲ. 11 ವರ್ಷ ತುಂಬ್ಸಿದ್ದಾರೆ ಅಷ್ಟೇ. ಮೀಡಿಯಾದವರು ಅವರಿಗೆ ಹೆಚ್ಚು ಪ್ರಚಾರ ಕೊಡ್ತಾರೆ. ಸುಳ್ಳು ವಿಚಾರಗಳನ್ನು ಹೇಳುತ್ತಾರೆ. ನಾವು ಗ್ಯಾರಂಟಿ ಯೋಜನೆ ಮಾಡಿದಾಗ ಆಗಲ್ಲ ದಿವಾಳಿಯಾಗುತ್ತದೆ ಎಂದ್ರು. ಆಮೇಲೆ ಅವರೇ ಅದನ್ನೇ ಅವರು ಕಾಪಿ ಮಾಡಿದ್ರು. ಆಮೇಲೆ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ತೆರಿಗೆ ಹಂಚಿಕೆಯಲ್ಲಿ 50% ಸಿಗಬೇಕು ಎಂದ್ರು. ಇವರೇ ಪ್ರಧಾನಿಯಾದಾಗ ಏನು ಮಾಡಿದ್ರು? ಮಾಡಿಲ್ಲ. ಅದನ್ನೆಲ್ಲಾ ನೀವು ಏನೂ ಹೇಳಲ್ಲ. ನಿರ್ಮಲಾ ಸೀತಾರಾಮನ್ ಶಿಫಾರಸ್ಸು ಮಾಡಿದ ಹಣ ಕೊಟ್ರಾ? ಇದೆಲ್ಲಾ ಮೇಜರ್ ಅಲ್ವಾ? ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಬಿಜೆಪಿಯವರು ಎಲ್ಲಾ ಕೇಳಿ ಎಂದರೆ ಸುಳ್ಳು ಹೇಳಿ ಇಲ್ಲಿ ಅಪಪ್ರಚಾರ ಮಾಡ್ತಿದ್ದಾರೆ’ ಎಂದಿದ್ದಾರೆ. ಮೋದಿ ಸರ್ಕಾರಕ್ಕೆ ಎಷ್ಟು ಮಾರ್ಕ್ ಕೊಡ್ತೀರಿ ಎಂದು ಕೇಳಿದ್ದಕ್ಕೆ ‘ಜೀರೋ ಮಾರ್ಕ್ ಕೊಡ್ತೀನಿ’ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Indore Couple murder: ಮದುವೆ ಇಷ್ಟ ಇಲ್ಲ ಅಂದ್ರೆ ಆಗ್ಬೇಡಿ, ಮರ್ಡರ್ ಯಾಕೆ ಮಾಡ್ತೀರಿ