Webdunia - Bharat's app for daily news and videos

Install App

ಚಾನ್ಸ್ ಕೊಟ್ಟರೆ ಎಲ್ಲರನ್ನೂ ನುಂಗಿ ಹಾಕ್ತೇವೆ ಎಂದ ಈಶ್ವರಪ್ಪ

Webdunia
ಶನಿವಾರ, 13 ಏಪ್ರಿಲ್ 2019 (17:44 IST)
ಮಾಜಿ ಡಿಸಿಎಂ ಈಶ್ವರಪ್ಪಗೆ ನಿಂಬೆ ಹಣ್ಣು ಕೊಡೋದಾಗಿ ರೇವಣ್ಣ ಹೇಳಿಕೆ ನೀಡಿರುವ ಬೆನ್ನಲ್ಲೇ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ನಿಂಬೆಹಣ್ಣು ಕೊಡೋದಾದ್ರೆ ಕೊಡಲಿ. ನಮ್ಮನೇಲಿ ನಾನ್ ವೆಜ್ ಚೆನ್ನಾಗಿ ಮಾಡ್ತಾರೆ. ಅದಕ್ಕೆ ಹಿಂಡ್ಕೋತೀನಿ. ನಿಂಬೆಹಣ್ಣು ಸಮೇತ ರೇವಣ್ಣನನ್ನೇ ನುಂಗಿಬಿಡ್ತೇನೆ. ಜೆಡಿಎಸ್ ನವರಿಗೆ ಬಿಜೆಪಿ ಬಗ್ಗೆ ಗೊತ್ತಿಲ್ಲ. ಚಾನ್ಸ್ ಕೊಟ್ಟರೆ ಎಲ್ಲರನ್ನೂ ನುಂಗಿ ಹಾಕ್ತೇವೆ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಮತ್ತು ರೇವಣ್ಣಗೆ ಸುಳ್ಳು ಹೇಳಿ ಅಭ್ಯಾಸವಾಗಿದೆ. ಕಳೆದ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾದ್ರೆ ದೇಶ ಬಿಡೋದಾಗಿ ಹೇಳಿದ್ದರು. ಈಗ ಅವರ ಪುತ್ರ ರೇವಣ್ಣ ಕಾಂಗ್ರೆಸ್-ಜೆಡಿಎಸ್ 22 ಸ್ಥಾನ ಗೆಲ್ಲದಿದ್ದಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸೋದಾಗಿ ಹೇಳ್ತಾರೆ. ದೇವೇಗೌಡರು ದೇಶ ಬಿಟ್ಟರೇನ್ರೀ? ಅಂತ ಈಶ್ವರಪ್ಪ ಪ್ರಶ್ನೆ ಮಾಡಿದ್ರು.

ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನ ಖಚಿತ ಎಂದ ಅವರು, ಹಲವಾರು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ. ಸಮ್ಮಿಶ್ರ ಸರ್ಕಾರ ನೆಗೆದು ಬೀಳೋದು ಖಚಿತ ಅಂತ ಕಲಬುರ್ಗಿಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments