Select Your Language

Notifications

webdunia
webdunia
webdunia
webdunia

ಸರ್ಕಾರದ ಜಜೆಟ್ ಬಗ್ಗೆ ಕೈ ನಾಯಕರು ವ್ಯಂಗ್ಯ

ಸರ್ಕಾರದ ಜಜೆಟ್ ಬಗ್ಗೆ ಕೈ ನಾಯಕರು ವ್ಯಂಗ್ಯ
bangalore , ಶುಕ್ರವಾರ, 17 ಫೆಬ್ರವರಿ 2023 (20:26 IST)
ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ಕುರಿತು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ. ಈ ಬಗ್ಗೆ ಬಜೆಟ್ ಕಲಾಪದಲ್ಲಿ ಭಾಗವಹಿಸಿದಂತೆ ಕಿವಿ ಮೇಲೆ ಹೂ ಇಟ್ಟುಕೊಂಡೇ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸಿದ್ದಾರೆ. 2023-24ರ ಮುಂಗಡಪತ್ರ ಮಂಡಿಸಿದ್ದಾರೆ. ಇದು ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್. ನಾನು ಕೊನೆಯ ಬಜೆಟ್ ಮಂಡಿಸಿದಾಗ 5 ವರ್ಷದಲ್ಲಿ ಏನು ಮಾಡಿದ್ದೆ? ಮುಂದೆನೂ ಮಾಡುತ್ತೇನೆ ಎಂಬುದನ್ನು ಹೇಳಿದ್ದೆ. ಆದರೆ ಇವರು ಹಾಗೆ ಮಾಡಿಲ್ಲ. ಕೇಂದ್ರ ತೆರಿಗೆ ಪಾಲು ಹೆಚ್ಚು ಬಂದಿಲ್ಲ.ಕೇಂದ್ರ ಸರ್ಕಾರ ರಾಜ್ಯವನ್ನು ಸುಲಿಗೆ ಮಾಡಿದೆ. ರಾಜ್ಯಕ್ಕೆ ಅನ್ಯಾಯ ಮಾಡಾಲಾಗಿದೆ ಎಂದು ಹೇಳಿದರು.ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮಾತನಾಡಿ ಈ ಸರ್ಕಾರದ ಇದು ಲಾಸ್ಟ್ ಬಜೆಟ್ ಬಿಜೆಪಿ ಭರಿ ಘೋಷಣೆ ಭರವಸೆ ಮಾತ್ರಾ ಆಗಿದೆ.ನಾವು ಕಿವಿ ಮೇಲೆ ಮುಡಿದುಕೊಂಡು ಹೋಗಿರುವಂತ ಚೆಂಡು ಹೂವಿನಷ್ಟು ಈ ಬಜೆಟ್ ಅರ್ಹ ಅಲ್ಲಾ ಆ ರೀತಿ ವೀಕ್ ಬಜೆಟ್ ಆಗಿದೆ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ