Select Your Language

Notifications

webdunia
webdunia
webdunia
webdunia

ಅಗಲಿದ ಕರುಣಾಗೆ ಗಡಿಭಾಗದಲ್ಲಿ ಗೌರವ

ಅಗಲಿದ ಕರುಣಾಗೆ ಗಡಿಭಾಗದಲ್ಲಿ ಗೌರವ
ಆನೇಕಲ್ , ಬುಧವಾರ, 8 ಆಗಸ್ಟ್ 2018 (17:30 IST)
ತಮಿಳುನಾಡಿನ ಮಾಜಿ ಸಿಎಂ‌ ಕರುಣಾನಿಧಿ ವಿಧಿವಶರಾದ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದಲ್ಲಿ ಜನರು ದುಃಖತಪ್ತರಾಗಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ಗಡಿಭಾಗವಾದ ಅತ್ತಿಬೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ತಮಿಳುನಾಡಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ  ಬಂದ್ ಮಾಡಲಾಗಿತ್ತು.

ಕರ್ನಾಟಕ ವಾಹನಗಳು ತಮಿಳುನಾಡಿಗೆ ಹೋಗದಂತೆ ನಿರ್ಬಂಧ ವಿಧಿಸಲಾಗಿತ್ತು. ಗಡಿಭಾಗದಿಂದ ಜನರನ್ನು ಪೊಲೀಸರು ವಾಪಸ್ ಕಳುಹಿಸಿದರು.

ಇನ್ನು ಕರುಣಾನಿಧಿ ಅಭಿಮಾನಿಗಳು ಹಲವೆಡೆ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಸ್ವಯಂ ಪ್ರೇರಿತ ಬಂದ್ ಮಾಡುವ ಮೂಲಕ ಅಗಲಿದ ಹಿರಿಯ ನಾಯಕನಿಗೆ ಗೌರವ ಸಲ್ಲಿಸಿದರು. ಯಾವುದೇ ಅಹಿತಕರ ಘಟನೆ‌ ನಡೆಯದಂತೆ ಬಿಗಿ ಬಂದೋಬಸ್ತ್ ನ್ನು ಗಡಿಭಾಗದಲ್ಲಿ ಕೈಗೊಳ್ಳಲಾಗಿತ್ತು.




Share this Story:

Follow Webdunia kannada

ಮುಂದಿನ ಸುದ್ದಿ

ಊಹಾಪೋಹದಲ್ಲಿ ಕಾಲ ಕಳೆಯುವುದೇ ಬಿಜೆಪಿಯವರ ಜಾಯಮಾನ ಎಂದ ಸಚಿವ!