Select Your Language

Notifications

webdunia
webdunia
webdunia
webdunia

ಸಿಂಹದ ದಾಳಿಯಿಂದ ಪಾರಾದ ಯುವಕರು

ಸಿಂಹದ ದಾಳಿಯಿಂದ ಪಾರಾದ ಯುವಕರು
ಬಳ್ಳಾರಿ , ಶುಕ್ರವಾರ, 11 ಅಕ್ಟೋಬರ್ 2019 (18:44 IST)
ಯುವಕರ ಗುಂಪೊಂದು ಸಿಂಹದ ದಾಳಿಯಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರೋ ಘಟನೆ ನಡೆದಿದೆ.

ಯುವಕರು ವಾಹನದಲ್ಲಿ ಹೊರಟಿದ್ದಾಗ  ವಾಹನದ ಹಿಂದಿನಿಂದ ಸಿಂಹವೊಂದು ಬೆನ್ನು ಹತ್ತಿದೆ. ಇದರಿಂದ ಕೆಲಕಾಲ ಜೀವಭಯದಲ್ಲಿಯೇ ಯುವಕರು ವಾಹನದಲ್ಲಿದ್ದರು.

ಸಫಾರಿಗೆ ಹೋಗಿದ್ದಾಗ ಯುವಕರಿದ್ದ ವಾಹನವನ್ನು ಸಿಂಹವೊಂದು ಬೆನ್ನಟ್ಟಿದೆ. ಗಾಬರಿಗೊಂಡ ಯುವಕರು ವಾಹನವನ್ನು ಸ್ಪೀಡ್ ಆಗಿ ಚಲಾಯಿಸುವಂತೆ ಸಿಬ್ಬಂದಿ ಚಾಲಕನಿಗೆ ಹೇಳಿದ್ದಾರೆ.

ಕಿಲೋ ಮೀಟರ್ ವರೆಗೆ ಬೆನ್ನಟ್ಟಿದ ಸಿಂಹ ಆ ಬಳಿಕ ಕಾಡಿನಲ್ಲಿ ಕಣ್ಮರೆಯಾಯಿತು. ಇದರಿಂದ ವಾಹನದಲ್ಲಿದ್ದವರು ನಿಟ್ಟುಸಿರು ಬಿಟ್ಟಿರು.

ಬಳ್ಳಾರಿ ಜಿಲ್ಲೆಯ ಕಮಲಾಪುರ ಬಳಿಯ ಜಿಯೋಲಾಜಿಕಲ್ ಪಾರ್ಕಿನಲ್ಲಿ ಈ ಘಟನೆ ನಡೆದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯರ ರಕ್ಷಣೆಗೆ ಪಿಂಕ್ ವಾಟ್ಸಪ್ ಗ್ರುಪ್