Select Your Language

Notifications

webdunia
webdunia
webdunia
webdunia

ನಿನ್ನೆ ನಡೆದದ್ದೂ ಇಂದೂ ಆಗಿದೆ ಆದ್ರೆ ಊರು ಬೇರೆ!

ನಿನ್ನೆ ನಡೆದದ್ದೂ ಇಂದೂ ಆಗಿದೆ ಆದ್ರೆ ಊರು ಬೇರೆ!
ವಿಜಯಪುರ , ಬುಧವಾರ, 1 ಮೇ 2019 (19:04 IST)
ನಿನ್ನೆ ನಡೆದಿದ್ದ ಕಹಿ ಘಟನೆ ಮರೆಯುವ ಮುನ್ನವೇ ಅಂಥದ್ದೆ ಮತ್ತೊಂದು ಘಟನೆ ಮರುಕಳಿಸಿದ್ದು, ಜನರು ಹೈರಾಣಾಗುವಂತೆ ಮಾಡಿದೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಸರಣಿ ಕಳ್ಳತನ ನಿನ್ನ ನಡೆದಿತ್ತು. ಅದು ಮುಗಿದ ಈಗ ದೇವರಹಿಪ್ಪರಗಿಗೆ ಎಂಟ್ರಿಕೊಟ್ಟಿದ್ದಾರೆ ಖದೀಮರು. 

ದೇವರಹಿಪ್ಪರಗಿಯಲ್ಲಿ ಮುಂದುವರಿದಿದೆ ಕಳ್ಳರ ಕೈಚಳಕ. 8 ಮನೆ ಹಾಗೂ 2 ಅಂಗಡಿಗಳನ್ನ ಒಡೆದು ಅಪಾರ ಪ್ರಮಾಣದ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.  

ಬೇಸಿಗೆಯ ಝಳಕ್ಕೆ ಮಹಡಿಯ ಮೇಲೆ ಮಲಗಿದ್ದಾಗ ತಡರಾತ್ರಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ.  

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಮತಕ್ಷೇತ್ರದ ಕಲಕೇರಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದ ಘಟನೆ ಇದಾಗಿದೆ. ಗ್ರಾಮದ ಕಾಶಿನಾಥ ಹೆಗ್ಗಣದೊಡ್ಡಿ, ಬೋರಮ್ಮ ಬೆಂಡೆಗುಂಬಳ ಸೇರಿದಂತೆ ಇನ್ನು ಹಲವಾರು ಮನೆಗಳನ್ನು ಕಳ್ಳತನ ಮಾಡಿದ್ದಾರೆ.

ಸ್ಥಳಕ್ಕೆ ಸಿಂದಗಿ ಸಿಪಿಐ ದ್ಯಾಮಣ್ಣವರ ಹಾಗೂ ಕಲಕೇರಿ ಪಿಎಸ್ಐ ಎನ್. ಆರ್. ಕಿಲಾರೆ ಆಗಮಿಸಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದ ಸಚಿವ