Publish Date: Fri, 26 Jul 2019 (18:21 IST)
Updated Date: Fri, 26 Jul 2019 (18:24 IST)
ಮೈತ್ರಿ ಸರಕಾರಕ್ಕೆ ವಿಶ್ವಾಸಮತದಲ್ಲಿ ಸೋಲುಣಿಸಿ ಆ ಮೂಲಕ ಸರಕಾರ ರಚನೆಗೆ ಮುಂದಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ, ಸಿಎಂ ಆಗೋದಕ್ಕೂ ಮೊದಲೇ ಶಾಕ್ ನೀಡಿದ್ದಾರೆ.
ವರ್ಗಾವಣೆಗಳನ್ನು ಹಾಗೂ ಎಲ್ಲ ಕಾಮಗಾರಿಗಳನ್ನು ತಡೆಹಿಡಿಯಬೇಕೆಂದು ಬಿ.ಎಸ್.ಯಡಿಯೂರಪ್ಪನವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಹೀಗಾಗಿ ಎಲ್ಲಾ ಇಲಾಖಾಧಿಕಾರಿಗಳಿಗೆ ವರ್ಗಾವಣೆ ಹಾಗೂ ಕಾಮಗಾರಿಗಳನ್ನು ತಡೆಹಿಡಿಯುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ನೀಡಿದ್ದಾರೆ.
ಮೈತ್ರಿ ಸರಕಾರ ಪತನಕ್ಕೂ ಮೊದಲು ವರ್ಗಾವಣೆ ಭಾರೀ ಪ್ರಮಾಣದಲ್ಲಿ ಆಗುತ್ತಿದ್ದು, ಗೋಲ್ ಮಾಲ್ ನಡೆದಿದೆ ಅಂತ ಬಿಜೆಪಿ ಆರೋಪ ಮಾಡಿತ್ತು.