Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿಯಾಗಿ ಯಡಿಯೂರಪ್ಪಗೆ ಪಟ್ಟಾಭಿಷೇಕ

ಮುಖ್ಯಮಂತ್ರಿಯಾಗಿ ಯಡಿಯೂರಪ್ಪಗೆ ಪಟ್ಟಾಭಿಷೇಕ
ಬೆಂಗಳೂರು , ಶುಕ್ರವಾರ, 26 ಜುಲೈ 2019 (18:30 IST)
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರು ಪ್ರತಿಜ್ಞಾವಿಧಿಯನ್ನು ಯಡಿಯೂರಪ್ಪನವರಿಗೆ ಬೋಧಿಸಿದರು.
ಮೈತ್ರಿ ಸರಕಾರ ಸದನದಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ವಿಫಲವಾದ ಬಳಿಕ ಯಡಿಯೂರಪ್ಪ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಸರಕಾರ ರಚನೆಗೆ ಅವಕಾಶ ಕೋರಿದ್ರು.

ಅದರಂತೆ ಇಂದು ಸಂಜೆ 6.30ಕ್ಕೆ ಮುಖ್ಯಮಂತ್ರಿಯಾಗಿ ಹಸಿರು ಶಾಲು ಹೊದ್ದು ಬಿ.ಎಸ್.ಯಡಿಯೂರಪ್ಪ ಪದಗ್ರಹಣ ಮಾಡಿದ್ರು.
ಯಡಿಯೂರಪ್ಪನವರಿಗೆ ದೇವರ ಪ್ರಸಾದ ನೀಡಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಶುಭ ಕೋರಿದ್ರು. ಬಿಜೆಪಿ ಶಾಸಕರು, ಮಾಜಿ ಸಚಿವರು, ಮುಖಂಡರು ಪಾಲ್ಗೊಂಡಿದ್ರು.

ಸಂಸದೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ನ ಉಚ್ಛಾಟಿತ ಶಾಸಕ ರೋಷನ್ ಬೇಗ್ ಮತ್ತಿತರರು ಪಾಲ್ಗೊಂಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ವರ್ಗಾವಣೆಗೆ ತಡೆಗೆ ಯಡಿಯೂರಪ್ಪ ಆದೇಶ; ಪ್ರಮಾಣವಚನಕ್ಕೂ ಮೊದಲೇ ಪ್ಲಾನ್ ಶುರು