Select Your Language

Notifications

webdunia
webdunia
webdunia
webdunia

ಬಿಎಸ್ ವೈ ಅನ್ನು ಮುಗಿಸಲು ಕೇಂದ್ರ ಸಚಿವರಿಬ್ಬರಿಂದ ಯತ್ನ-ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಬಿಎಸ್ ವೈ ಅನ್ನು ಮುಗಿಸಲು ಕೇಂದ್ರ ಸಚಿವರಿಬ್ಬರಿಂದ ಯತ್ನ-ಹೊಸ ಬಾಂಬ್ ಸಿಡಿಸಿದ ಯತ್ನಾಳ್
ವಿಜಯಪುರ , ಬುಧವಾರ, 9 ಅಕ್ಟೋಬರ್ 2019 (12:11 IST)
ವಿಜಯಪುರ : ಬಿಜೆಪಿಯ ಕೇಂದ್ರ ಸಚಿವರಿಬ್ಬರು ಸಿಎಂ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.




ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ನೀಡಲು ವಿಳಂಬ ಮಾಡಿದ್ದಕ್ಕೆ ಗರಂ ಆಗಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ ಬಸವನ ಗೌಡ ಪಾಟೀಲ್‌ ಯತ್ನಾಳ್‌ ಅವರ ಹೇಳಿಕೆಗೆ ಸ್ಪಷ್ಟೀಕರಣ ಕೋರಿ ಅವರಿಗೆ ಶೋಕಾಸ್‌ ನೋಟಿಸ್ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ದೆಹಲಿ ನಾಯಕರ ಭೇಟಿಗೆ ಮುಂದಾದ ಅವರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.


‘ಯಡಿಯೂರಪ್ಪಗೆ 76 ವರ್ಷ ವಯಸ್ಸಾಗಿದೆ. ಅವ್ರಿಂದ ರಾಜೀನಾಮೆ ಪಡೆಯಿರಿ ಎಂದು ಬಿಜೆಪಿಯ ಇಬ್ಬರು ಕೇಂದ್ರ ಸಚಿವರು ಹೈಕಮಾಂಡ್ ಗೆ ಒತ್ತಡ ಹಾಕುತ್ತಿದ್ದಾರೆ. ಮೋದಿ ಭೇಟಿ ಮಾಡುವ ನನ್ನ ಯತ್ನಕ್ಕೂ ಕೂಡ ಆ ಇಬ್ಬರು ನಾಯಕರು ಅಡ್ಡಿಯಾಗಿದ್ದಾರೆ’ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಾಡಿನ ಮೂಲಕ ರಮೇಶ್ ಜಾರಕಿಹೊಳಿಗೆ ತಿವಿದ ಸತೀಶ್ ಜಾರಕಿಹೊಳಿ