Select Your Language

Notifications

webdunia
webdunia
webdunia
webdunia

ಅರಣ್ಯ ಇಲಾಖೆ ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ: ಯುವಕರಿಗೆ ಧರ್ಮದೇಟು

ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ
Mysore , ಭಾನುವಾರ, 24 ಜೂನ್ 2018 (21:20 IST)
ಅರಣ್ಯ ಇಲಾಖೆ ಮಹಿಳಾ ಸಿಬ್ಬಂದಿ ಜತೆ ಅಸಭ್ಯ ವರ್ತನೆ: ಯುವಕರಿಗೆ ಧರ್ಮದೇಟು
ಮೈಸೂರು: ಕುಡಿದ ಅಮಲಿನಲ್ಲಿ ಯುವಕನೊಬ್ಬ ಅರಣ್ಯ ಇಲಾಖೆಯ ಮಹಿಳಾ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಚುಂಚನಕಟ್ಟೆಯ ಫಾಲ್ಸ್ ಬಳಿ ನಡೆದಿದೆ.


ಘಟನೆ ಇದಿಷ್ಟು:
ಕೆಲವು ದಿನಗಳ ಹಿಂದೆ ಚುಂಚನಕಟ್ಟೆ ಫಾಲ್ಸ್ ನಲ್ಲಿ ಟಿಆರ್ ಐನ ಅಧಿಕಾರಿಯೊಬ್ಬರು ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಧನುಷ್ಕೋಟಿಯ ಚುಂಚನಕಟ್ಟೆ ಫಾಲ್ಸ್ ಗೆ ಅರಣ್ಯ ಇಲಾಖೆ ಮಹಿಳಾ ಕಾವಲು ಸಿಬ್ಬಂದಿಯನ್ನು ನಿಯೋಜಿಸಿತ್ತು. ಆದರೆ ಸ್ಥಳೀಯ ಗ್ರಾಮದ ಯುವಕ ಸುನೀಲ್ ತನ್ನ ಸ್ನೇಹಿತ ಪ್ರತಾಪ್ ಜತೆ ಸೇರಿ ಕುಡಿದು ಬಂದು ಕಾವಲಿಗೆ ಇದ್ದ ಮಹಿಳಾ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ತಕ್ಷಣ ಅರಣ್ಯ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಸಂದರ್ಭದಲ್ಲಿ ಈ ಯುವಕರು ಪೊಲೀಸರ ಹೋಗಲು ಪುಂಡಾಟ ನಡೆಸಿದಾಗ ತಕ್ಷಣ ಸಾರ್ವಜನಿಕರು ಮತ್ತು ಸಿಬ್ಬಂದಿ ಯುವಕರಿಗೆ ಥಳಿಸಿ ಪೊಲೀಸ್ ಜೀಪ್ ಹತ್ತಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಜನಪ್ರತಿನಿಧಿಗಳ ಆಸ್ತಿಯ ಕುರಿತು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ತೆಗೆದುಕೊಂಡ ಹೊಸ ನಿರ್ಧಾರವೇನು?