Select Your Language

Notifications

webdunia
webdunia
webdunia
webdunia

ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

ಆನೆಯಿಂದ ಲಾರಿ ಕೇಸ್

Sampriya

ಚಾಮರಾಜನಗರ , ಶುಕ್ರವಾರ, 22 ಆಗಸ್ಟ್ 2025 (19:32 IST)
Photo Credit X
ಚಾಮರಾಜನಗರ: ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಎಸ್‌ಟಿಆರ್) ಕಬ್ಬು ತುಂಬಿದ ಲಾರಿಯನ್ನು ಕಾಡಾನೆಯೊಂದು  ಅಡ್ಡಗಟ್ಟಿ ವಿಂಡ್‌ಶೀಲ್ಡ್ ಅನ್ನು ಹಾನಿಗೊಳಿಸಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಾರ್ಪಾಲಿನ್ ಅನ್ನು ತನ್ನ ಸೊಂಡಿಲಿನಿಂದ ಹರಿದು ಹಾಕಿ, ಕಬ್ಬಿನ ಗೊಂಚಲನ್ನು ಎಳೆದಿದೆ.

ಸಂಜೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಹಾಸನೂರು ಸಮೀಪದ ಅರೆಪಾಳ್ಯಂ ಜಂಕ್ಷನ್ ಮತ್ತು ದಿಂಡುಗಲ್-ಮೈಸೂರು ರಾಷ್ಟ್ರೀಯ ಹೆದ್ದಾರಿಯ (ಎನ್‌ಎಚ್ 948) ದಿಂಬಂ ನಡುವೆ, ತಾಳವಾಡಿಯಿಂದ ಸತ್ಯಮಂಗಲದ ಖಾಸಗಿ ಸಕ್ಕರೆ ಕಾರ್ಖಾನೆಗೆ ಲಾರಿ ಕಬ್ಬನ್ನು ಸಾಗಿಸುತ್ತಿದ್ದಾಗ ನಡೆದಿದೆ. 

ಲಾರಿ ಸಹಾಯಕರು ರೆಕಾರ್ಡ್ ಮಾಡಿದ 1.01 ನಿಮಿಷಗಳ ವೀಡಿಯೊದಲ್ಲಿ ಆನೆಯು ವಾಹನದ ಬಳಿಗೆ ಬಂದು ಕಬ್ಬನ್ನು ಎಳೆದಿದೆ. ನಂತರ ಚಾಲಕ ಲಾರಿಯನ್ನು ಸ್ಟಾರ್ಟ್ ಮಾಡಿ ಓಡಿಸಿದ್ದಾನೆ.




Share this Story:

Follow Webdunia kannada

ಮುಂದಿನ ಸುದ್ದಿ

ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅಮಿತ್ ಶಾ ಗಂಭೀರ ಆರೋಪ