ಸಾವಿರಾರು ಲೀಟರ್ ಮದ್ಯ ರಸ್ತೆ ಮೇಲೆ ಸುರಿದದ್ದು ಏಕೆ?

Webdunia
ಶನಿವಾರ, 24 ನವೆಂಬರ್ 2018 (19:47 IST)
ರಾಜ್ಯ ಗಡಿ ಭಾಗವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮದ್ಯದ ಹೊಳೆ ಹರಿಯಿತು. ವಿವಿಧ ಬ್ರ್ಯಾಂಡ್ ನ ಸಾವಿರಾರು ಲೀಟರ್ ಮದ್ಯ ರಸ್ತೆ ಮೇಲೆ ಸುರಿಸಲಾಯಿತು. 

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಬಕಾರಿ ಇಲಾಖೆಯವರು ಜಿಲ್ಲೆಯಾದ್ಯಂತ ದಾಳಿ ನಡೆಸಿ ವಶಪಡಿಸಿಕೊಂಡ 4600 ಲೀಟರ್ ಗೋವಾ ಅಕ್ರಮ ಮದ್ಯವನ್ನು, ಕಾರವಾರ ಗಡಿಯಲ್ಲಿ ನಾಶ ಪಡಿಸಲಾಯಿತು. ಗೋವಾ ರಾಜ್ಯದಿಂದ ಅಕ್ರಮವಾಗಿ ಸಾಗಿಸಲು ಯತ್ನಿಸಿದ ಮದ್ಯವನ್ನು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿನ ಬೇರೆ ಬೇರೆ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆಯವರು ವಶ ಪಡಿಸಿಕೊಂಡಿದ್ದರು. 

ಬೇರೆ ಬೇರೆ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ  ಈ ಮದ್ಯವನ್ನು  ನಾಶ ಪಡಿಸಲಾಯಿತು. ಗೋವಾದಲ್ಲಿ ತಯಾರಿಸಲಾಗಿರುವ ಬಗ್ಗೆ ಲೇಬಲ್ ಹೊಂದಿರುವ ನಕಲಿ ಮದ್ಯವನ್ನು ರಾಜ್ಯಕ್ಕೆ ಸಾಗಿಸುವ ಮೂಲಕ ಇಲ್ಲಿನ ‌ಜನರ ಆರೋಗ್ಯ ಹಾಳು‌ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಆದ್ದರಿಂದ ಗೋವಾದ ಅಕ್ರಮ‌ ಮದ್ಯವನ್ನು ಯಾರು ಕೂಡ ಸೇವಿಸಬಾರದು ಎಂದು ಅಬಕಾರಿ ಇಲಾಖೆ ಡಿಸಿ ಎಲ್ ಮಂಜುನಾಥ ತಿಳಿಸಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೋನಿಯಾಗೆ ಯಾವ ಅಧಿಕಾರವಿತ್ತು ಎಂದು ಚುನಾವಣಾ ಆಯುಕ್ತರನ್ನು ನೇಮಕ ಮಾಡಿದ್ರು: ಬಿಜೆಪಿ ಪ್ರಶ್ನೆ

ಗ್ಯಾರಂಟಿ ಬಗ್ಗೆ ಶಾಸಕಾಂಗ ಸಭೆಯಲ್ಲಿ ಶಾಸಕರಿಂದಲೇ ಶಾಕಿಂಗ್ ಮಾತುಗಳು: ಮುಂದೇನು

ಸಿದ್ದರಾಮಯ್ಯನವರಿಗೆ ಪುತ್ರನಿಂದಲೇ ಎದುರಾಯ್ತಾ ಸಂಕಷ್ಟ

Karnataka Weather: ಇಂದು ಚಳಿ ಎಷ್ಟಿರಲಿದೆ ಗೊತ್ತಾ

ಮಂಗಳೂರು: ಇನ್ನೇನೂ ಮದುವೆಗೆ ಎರಡು ದಿನವಿರುವಾಗ ನಾಪತ್ತೆಯಾದ ಹುಡುಗು, ಕೊನೆಗೂ ಪತ್ತೆ

ಮುಂದಿನ ಸುದ್ದಿ
Show comments