Select Your Language

Notifications

webdunia
webdunia
webdunia
webdunia

ಪೆಟ್ರೋಲ್ ಸುರಿದು ಕೊಂದದ್ದು ಯಾರನ್ನು?

ಪೆಟ್ರೋಲ್ ಸುರಿದು ಕೊಂದದ್ದು ಯಾರನ್ನು?
ಮಂಡ್ಯ , ಗುರುವಾರ, 7 ನವೆಂಬರ್ 2019 (21:27 IST)
ಆ ವ್ಯಕ್ತಿಯ ದೇಹಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಇಡಲಾಗಿತ್ತು. ಹೊತ್ತಿ ಉರಿಯುತ್ತಿದ್ದ ದೇಹವನ್ನು ನೋಡಿದ ಜನರು ಮಾಡಿದ್ದೇನು?

ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಮಂಡ್ಯದ  ಮಳವಳ್ಳಿ ಪಟ್ಡಣದ ಅಂಬೇಡ್ಕರ್ ಭವನದ ಬಳಿ ಘಟನೆ ನಡೆದಿದೆ.

ಪೆಟ್ರೋಲ್ ಸುರಿದ ಕಾರಣ ಹೊತ್ತಿ ಉರಿಯುತ್ತಿತ್ತು ಅಪರಿಚಿತ ದೇಹ. ಅಪರಿಚಿತ ಶವ ಉರಿಯುತ್ತಿರೋದನ್ನ  ಗಮನಿಸಿದ ಸ್ಥಳೀಯರಿಂದ  ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ.

ಸ್ಥಳಕ್ಕೆ ಬಂದ ಪೊಲೀಸರಿಂದ ಹೊತ್ತಿ ಉರಿಯುತ್ತಿದ್ದ ಶವದ ಬೆಂಕಿ‌ ನಂದಿಸಿ ಶವ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಶವ ಸುಟ್ಟು ಕರಕಲಾಗಿರೋದ್ರಿಂದ ಗುರುತ್ತು ಪತ್ತೆಯಾಗಿಲ್ಲ. ಸಾಕಷ್ಟು ಕುತೂಹಲ ಮೂಡಿಸಿದೆ ಅಪರಿಚಿತ ಶವದ ದಹನ ಪ್ರಕರಣ. ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಣ್ಣ ಊರಲ್ಲಿ 10 ಕ್ಕೂ ಹೆಚ್ಚು ಡೆಂಗ್ಯು ಕೇಸ್ : ಆರೋಗ್ಯ ಇಲಾಖೆ ಅಧಿಕಾರಿಗಳೇ ಮಾಯ