Select Your Language

Notifications

webdunia
webdunia
webdunia
Tuesday, 8 April 2025
webdunia

ಕೈ ನಾಯಕರ ಗೊಡ್ಡು ಬೆದರಿಕೆಗೂ ಹೆದರಲ್ಲ ಎಂದೋರು ಯಾರು?

ಕಾಂಗ್ರೆಸ್
ಮಂಡ್ಯ , ಗುರುವಾರ, 4 ಏಪ್ರಿಲ್ 2019 (18:10 IST)
ಚುನಾವಣೆ ಕಣ ರಣಬಿಸಿಲಿಗಿಂತಲೂ ಜೋರಾಗಿದೆ. ಮಂಡ್ಯದಲ್ಲಿ ಕೈ ಪಡೆಯ ಕಾರ್ಯಕರ್ತರು ತಮ್ಮ ಪಕ್ಷದ ಹಿರಿಯ ಮುಖಂಡರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಸುಮಲತಾ ಜೊತೆ ಕಾಂಗ್ರೆಸ್ ಬಾವುಟ ಹಿಡಿದೇ ಪ್ರಚಾರ ಮಾಡ್ತೀವಿ. ತಾಕತ್ತಿದ್ದರೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳಲಿ. ಜೈಲಿಗೆ ಬೇಕಾದರೂ ಅಟ್ಟಲಿ. ಹೀಗಂತ ಮಂಡ್ಯದಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ.

ನಾವು ಯಾರಿಗೂ ಹೆದರಲ್ಲ. ಮೈತ್ರಿ ಅಭ್ಯರ್ಥಿಗೆ ನಮ್ಮ ಬೆಂಬಲವಿಲ್ಲ. ನಮ್ಮ ಬೆಂಬಲ ಏನಿದ್ದರೂ ಸುಮಲತಾಗೆ ಎಂದಿದ್ದಾರೆ. ಸಭೆ ಬಳಿಕ ಕೈ ಮುಖಂಡರಿಗೆ ಖಡಕ್ ಎಚ್ಚರಿಕೆ ರವಾನಿಸಿರುವ ಕಾರ್ಯಕರ್ತರ ನಡೆ ಕಾಂಗ್ರೆಸ್ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಮಿತ್ ಷಾ ಪಾಠ ನನಗೆ ಬೇಕಾಗಿಲ್ಲ ಎಂದ ಖರ್ಗೆ