Webdunia - Bharat's app for daily news and videos

Install App

ಗೌರಿ ಲಂಕೇಶ್ ಹತ್ಯೆ ಬಳಿಕ ಲಂಕೇಶ್ ಪತ್ರಿಕೆ ಗತಿಯೇನು? ಇಂದ್ರಜಿತ್ ಲಂಕೇಶ್ ಹೇಳಿದ್ದಿಷ್ಟು!

Webdunia
ಗುರುವಾರ, 7 ಸೆಪ್ಟಂಬರ್ 2017 (11:48 IST)
ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಅವರು ಬಹುವಾಗಿ ಪ್ರೀತಿಯಿಂದ ಬೆಳೆಸಿದ ಲಂಕೇಶ್ ಪತ್ರಿಕೆಯ ಭವಿಷ್ಯವೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ  ಗೌರಿ ಸಹೋದರ ಇಂದ್ರಜಿತ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಏನು ಹೇಳಿದ್ದಾರೆ ಗೊತ್ತಾ?

 
ಲಂಕೇಶ್ ಪತ್ರಿಕೆ ಬಗ್ಗೆ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿ ನಾವಿಲ್ಲ. ನಮ್ಮ ತಾಯಿ ಈ ಬಗ್ಗೆ ನಿರ್ಧರಿಸಬೇಕು. ತಾಯಿ, ಸಹೋದರಿ ಕವಿತಾ ಜತೆ ಚರ್ಚಿಸಿ ಈ ಬಗ್ಗೆ ನಿರ್ಧರಿಸಬೇಕಿದೆ. ನಮ್ಮ ತಾಯಿ  ಈಗ ಏನನ್ನೂ ಹೇಳುವ ಪರಿಸ್ಥಿತಿಯಲ್ಲಿಲ್ಲ ಎಂದು ಇಂದ್ರಜಿತ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ಸಹೋದರಿ ಬಗ್ಗೆ ಹೇಳಿಕೊಂಡಿರುವ ಇಂದ್ರಜಿತ್, ಗೌರಿ ಜೀವನದುದ್ದಕ್ಕೂ ತನ್ನ ಹೋರಾಟವನ್ನು ತಾನೇ ಮಾಡಿಕೊಂಡಳು. ಯಾವತ್ತೂ ಅದರಲ್ಲಿ ನಮ್ಮನ್ನು ಎಳೆಯುತ್ತಿರಲಿಲ್ಲ ಎಂದು ಸಹೋದರ ಇಂದ್ರಜಿತ್ ಲಂಕೇಶ್ ಹೇಳಿಕೊಂಡಿದ್ದಾರೆ.

ಆಕೆ ಹೆಚ್ಚಾಗಿ ಏಕಾಂಗಿಯಾಗಿರಲು ಬಯಸುತ್ತಿದ್ದಳು. ಆದರೆ ತನ್ನ ವಿಚಾರಗಳಿಗಾಗಿ ಹೋರಾಡಿದಳು. ಅವಳು ಯಾವತ್ತೂ ನನಗೆ ಜೀವ ಬೆದರಿಕೆ ಇದೆ ಎನ್ನುವ ವಿಷಯವನ್ನು ನಮಗೆ ಹೇಳುತ್ತಿರಲಿಲ್ಲ. ಬಹುಶಃ ಆಕೆಗೆ ಆಕೆಯ ಹೋರಾಟಗಳಲ್ಲಿ ನಾವು ಬರುವುದು ಇಷ್ಟವಿರಲಿಲ್ಲವೇನೋ ಎಂದು ಇಂದ್ರಜಿತ್ ಸಂದರ್ಶನದಲ್ಲಿ ಹೇಳಿದ್ದಾರೆ.

ಆದರೆ ಈ ಕೊಲೆಗೆ ನ್ಯಾಯ ಸಿಗಬೇಕು. ಈ ಕೊಲೆಗಾರರಿಗೆ ಶಿಕ್ಷೆ ಕೊಡುವ ಮೂಲಕ ಬೇರೆ ಕೊಲೆಯಾಗದಂತೆ ಪಾಠವಾಗಬೇಕು ಎಂದು ಇಂದ್ರಜಿತ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ.. ‘ನಮ್ಮನ್ನು ಕಂಡರೆ ಸಿದ್ದರಾಮಯ್ಯಗೆ ನಡುಕ’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಲೆ ಮಹದೇಶ್ವರ ಬೆಟ್ಟ: ಹುಲಿಗಳಿಗೆ ವಿಷ ಪ್ರಾಷನ ಮಾಡಿದ ಇಬ್ಬರು ಕೊನೆಗೂ ಬಂಧನ

Gold Price: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ

ಒಡಿಶಾದ ಪುರಿ ಜಗನ್ನಾಥ ಯಾತ್ರೆಯಲ್ಲಿ ಕಾಲ್ತುಳಿತ: 600 ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ

ಆದಾಯ ತೆರಿಗೆ ಸಲ್ಲಿಕೆ ಮಾಡುವ ಮೊದಲು ಈ ಹೊಸ ನಿಯಮ ತಿಳಿದುಕೊಳ್ಳಿ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಲು ಇದೇ ಕೊನೆ ದಿನಾಂಕ

ಮುಂದಿನ ಸುದ್ದಿ
Show comments