Webdunia - Bharat's app for daily news and videos

Install App

ದಿಟ್ಟ ಪತ್ರಕರ್ತೆ ಗೌರಿ ಹತ್ಯೆಗೆ ಕಮಲ್ ಹಾಸನ್ ಸೇರಿ ಹಲವರ ಖಂಡನೆ

Webdunia
ಗುರುವಾರ, 7 ಸೆಪ್ಟಂಬರ್ 2017 (11:34 IST)
ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಮತ್ತು ಪ್ರಕಾಶ್ ರೈ ಸಹ ಗೌರಿ ಹತ್ಯೆಯನ್ನ ಖಂಡಿಸಿದ್ದಾರೆ.

ಗನ್ನಿನ ಮೂಲಕ ಧ್ವನಿಯನ್ನ ಅಡಗಿಸುವುದು ಡಿಬೇಟ್ ಗೆಲ್ಲುವುದು ಅತ್ಯಂತ ನೀಚ ಮಾರ್ಗವಾಗಿದೆ.  ಗೌರಿ ಲಂಕೇಶ್ ನಿಧನದಿಂದ ದುಃಖತಪ್ತರಾಗಿರುವ ಎಲ್ಲರಿಗೂ ನನ್ನ ಸಂತಾಪವಿದೆ ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

30 ವರ್ಷಗಳಿಂದ ಗೌರಿ ಲಂಕೇಶ್ ನನಗೆ ಗೊತ್ತಿದೆ. ಒಂದು ರೀತಿಯಲ್ಲಿ ನಾವೆಲ್ಲರೂ ಪಿ. ಲಂಕೇಶ್ ಅವರ ಸಿದ್ಧಾಂತ, ಜೀವನಶೈಲಿಯಿಂದ ಪ್ರಭಾವಿತರಾದವರು. ಇವತ್ತಿನ ದಿನ ನಾವು ಯಾವ ಹಂತಕ್ಕೆ ಬಂದು ನಿಂತಿದ್ದೇವೆ ನೋಡಿ. ಅಸಹಿಷ್ಣುತೆ ಯಾವ ಮಟ್ಟಕ್ಕೆ ಬಂದು ನಿಂತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ..? ಕತ್ತಲಲ್ಲಿ ಬಂದು ಹೇಡಿಗಳು ಆಕೆಯನ್ನ ಕೊಂದು ಹೋಗಿದ್ದಾರೆ ಎಂದು ಖಂಡಿಸಿದ್ಧಾರೆ.

ಸೆಪ್ಟೆಂಬರ್ 5ರ ರಾತ್ರಿ ಕೆಲಸ ಮುಗಿಸಿಕೊಂಡು ರಾಜರಾಜೇಶ್ವರಿ ನಿವಾಸಕ್ಕೆ ಆಗಮಿಸಿದ ಗೌರಿ ಲಂಕೇಶ್ ಮೇಲೆ ಏಕಾಏಕಿ ಗುಂಡು ಹಾರಿಸಿದ್ದ. 3 ಬುಲೆಟ್`ಗಳು ಗೌರಿ ದೇಹ ಹೊಕ್ಕಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments