Publish Date: Sat, 04 May 2019 (16:24 IST)
Updated Date: Sat, 04 May 2019 (16:27 IST)
ಬೈ ಎಲೆಕ್ಷನ್ ನಲ್ಲಿ ಕುಂದಗೋಳ ಕ್ಷೇತ್ರದಲ್ಲಿ ಯಾವುದೇ ಅಸಮಾಧಾನ ಈಗ ಇಲ್ಲ. ಕುಂದಗೋಳದಲ್ಲಿ ಪ್ರಚಾರ ಕಾರ್ಯ ಆರಂಭವಾಗಿದೆ. ಅಂತ ಡಿಸಿಎಂ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಡಿಸಿಎಂ ಡಾ. ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಸಿಎಲ್ ಪಿ ನಾಯಕರು ಅದನ್ನೆಲ್ಲ ಸರಿ ಮಾಡಿದ್ದಾರೆ. ನಾನು ಕೂಡ ಹುಬ್ಬಳ್ಳಿ ಸಭೆಗೆ ಹೋಗುತ್ತಿದ್ದೇನೆ ಎಂದರು.
ಮಂಡ್ಯ ಕಾಂಗ್ರೆಸ್ ಗೆ ರೆಬೆಲ್ಸ್ ವಿರುದ್ಧ ಕ್ರಮ ಕೈಗೊಳ್ಳದ ವಿಚಾರ ಕುರಿತು ಕೆಪಿಸಿಸಿ ಅಧ್ಯಕ್ಷರು ಈಗಾಗಲೇ ಹೇಳಿಕೆ ಕೊಟ್ಟಿದ್ದಾರೆ. ಆ ಬಗ್ಗೆ ಅವರು ತೀರ್ಮಾನ ಮಾಡಿದ್ದಾರೆ.
ಸಾಧಕ ಬಾಧಕಗಳನ್ನ ನೋಡಿ, ಅವರನ್ನು ಕರೆದು ತೀರ್ಮಾನಿಸುತ್ತಾರೆ. ಇದೆಲ್ಲ ಅವರಿಗೆ ಬಿಟ್ಟದ್ದು. ಮೈತ್ರಿ ಸರ್ಕಾರದ ಮೇಲೆ ಈ ಬೆಳವಣಿಗೆ ಪರಿಣಾಮ ಬೀರಲ್ಲ. ಇದು ಸರ್ಕಾರದಲ್ಲಿ ಬಿರುಕು ಸೃಷ್ಟಿಸಲ್ಲ ಅಂತ ಡಿಸಿಎಂ ಹೇಳಿದ್ರು.