Select Your Language

Notifications

webdunia
webdunia
webdunia
webdunia

ಬೈ ಎಲೆಕ್ಷನ್ ಕೈನಲ್ಲಿ ಬಂಡಾಯ ಅಭ್ಯರ್ಥಿ

ಬೈ ಎಲೆಕ್ಷನ್ ಕೈನಲ್ಲಿ ಬಂಡಾಯ ಅಭ್ಯರ್ಥಿ
ಹುಬ್ಬಳ್ಳಿ , ಗುರುವಾರ, 2 ಮೇ 2019 (18:09 IST)
ಕುಂದಗೋಳ ಉಪ‌ಚುನಾವಣೆಗೆ ಸಂಬಂಧಿಸಿದಂತೆ ಕೈ ಪಾಳೆಯದಲ್ಲಿ ಬಂಡಾಯ ಭುಗಿಲೆದ್ದಿದೆ.

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಾನಂದ ಬೆಂತೂರು ನಾಮಪತ್ರ ವಾಪಸ್ ಪಡೆದಿದ್ದಾರೆ. ಆದರೆ ನಾಮಪತ್ರ ವಾಪಸ್ ಪಡೆದ ಬಳಿಕ ಹೇಳಿಕೆ ನೀಡಿದ್ದು ಮತ್ತೆ ಗೊಂದಲ ಸೃಷ್ಟಿ ಮಾಡಿದ್ದಾರೆ.

ನಾನು ಯಾವುದೇ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ. ನನಗೆ ಅಹಿಂದ ನಾಯಕರು ನಂಬಿಸಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ನನಗೆ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದಾಗಿನಿಂದಲೂ ಅನ್ಯಾಯ ಆಗುತ್ತಲೇ ಇದೆ. ಪದೇ ಪದೇ ಅನ್ಯಾಯ ನನಗೆ ಆಗುತ್ತಿದೆ ಎಂದಿದ್ದಾರೆ.

ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಣೆ ಮಾಡಿದ ಬೆಂತೂರು ಆ ಬಳಿಕ ಯಾವುದೇ ಪಕ್ಷದ ನಾಯಕರು ಮನೆಗೆ ಬಂದು ಟಿಕೆಟ್ ನೀಡಿದರೆ ಸ್ಪರ್ಧೆ ಮಾಡೋದು ನಿಶ್ಚಿತ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹೇಳಿಕೆ ನೀಡಿದ್ದಾರೆ ಶಿವಾನಂದ ಬೆಂತೂರು. ಬೆಂತೂರು ಅವರ  ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಕಾಲಿಗೆ ಇದಕ್ಕಾಗೇ ಬಿದ್ದಿದ್ದು ಎಂದ ಪ್ರತಾಪ ಸಿಂಹ