Publish Date: Mon, 16 Nov 2020 (14:51 IST)
Updated Date: Mon, 16 Nov 2020 (14:55 IST)
ಬೆಂಗಳೂರು : ಎಂಟಿಬಿ ಮತ್ತು ವಿಶ್ವನಾಥ್ ಗೆ ಸಚಿವ ಸ್ಥಾನ ನೀಡುವ ವಿಚಾರ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆಯೇ ನಡೆದಿಲ್ಲ. ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಸಚಿವ ಸ್ಥಾನ ನೀಡೋದು ಸಿಎಂಗೆ ಬಿಟ್ಟಿದ್ದು. ಪ್ರತ್ಯೇಕವಾಗಿ ಸಿಎಂ ಭೇಟಿ ಆಗುವ ಅಗತ್ಯ ಇಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ನುಡಿದಂತೆ ನಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಸ್ಕಿ ನಾಲಾ ಯೋಜನೆಗೆ ಅನುದಾನ ವಿಚಾರ ಬೈ ಎಲೆಕ್ಷನ್ ಗಿಮಿಕ್ ಗಾಗಿ ಘೋಷಣೆ ಮಾಡಿಲ್ಲ. ದೂರದೃಷ್ಟಿಯಿಂದ ಯೋಜನೆ ಮಾಡಿದ್ದಾರೆ. ಆಯ ಭಾಗದ ಜನರಿಗೆ ಸಹಾಯ ಆಗಲಿದೆ. ಸಿಎಂಗೆ ಯಾವಾಗ ಏನ್ ಮಾಡಬೇಕೆಂದು ಗೊತ್ತಿದೆ ಎಂದು ಅವರು ತಿಳಿಸಿದ್ದಾರೆ.