Select Your Language

Notifications

webdunia
webdunia
webdunia
webdunia

ಮುಂಗಾರು ಮಳೆಗಾಗಿ ಬೆಟ್ಟದಲ್ಲಿ ಮಾಡೇ ಬಿಟ್ರು

ಮುಂಗಾರು ಮಳೆಗಾಗಿ ಬೆಟ್ಟದಲ್ಲಿ ಮಾಡೇ ಬಿಟ್ರು
ನಂಜನಗೂಡು , ಸೋಮವಾರ, 6 ಮೇ 2019 (18:39 IST)
ಇದು ಮುಂಗಾರು ಮಳೆ ಸಿನಿಮಾ ಅಲ್ಲ. ಆದರೆ ಇಲ್ಲಿ ಮುಂಗಾರು ಮಳೆಗಾಗಿ ಬೆಟ್ಟದಲ್ಲಿ ಅದನ್ನು ಮಾಡಲಾಗಿದೆ.
ಮಳೆಗಾಗಿ ಬೆಟ್ಟದಲ್ಲಿ ದೇವರಿಗೆ ಪೂಜೆ ಸಲ್ಲಿಕೆ ಮಾಡಲಾಗಿದೆ.

ಮುಂಗಾರು ಮಳೆಯು ಇದುವರೆಗೂ ಆಗದ ಹಿನ್ನೆಲೆಯಲ್ಲಿ ಕೋಣನೂರು ಗ್ರಾಮಸ್ಥರು ಗ್ರಾಮದಲ್ಲಿರುವ ಬೆಟ್ಟಕ್ಕೆ ತೆರಳಿ ಪೂಜೆಯನ್ನು ನೆರವೇರಿಸಿ ಮಳೆಯಾಗುವಂತೆ ಪ್ರಾರ್ಥನೆ ಮಾಡಿದ್ರು.

ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಕೂಗಳತೆ ದೂರದಲ್ಲಿ ಬೆಟ್ಟವಿದೆ. ಅಲ್ಲಿನ ಮಹದೇಶ್ವರ ಮತ್ತು ಮಲ್ಲಪ್ಪ ಎಂಬ 2 ದೇವಸ್ಥಾನಗಳಿದ್ದು  ಪ್ರತಿ ವರುಷ ಮಳೆ ಬಿದ್ದ ನಂತರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಲಾಗುತ್ತಿತ್ತು. ಆದರೆ ಈ ಬಾರಿ ಇದುವರೆಗೂ ಒಂದೇ ಒಂದೂ ಮಳೆಯು ಬಾರದೇ ಇರುವ ಕಾರಣ ವಿಶೇಷಪೂಜೆ, ಪಂಚಾಮೃತ  ಅಭಿಷೇಕವನ್ನು ನೆರವೇರಿಸಿದರು.

ಗ್ರಾಮದ  ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ತೆರಳಿ ಭಕ್ತಿಯನ್ನು ಸಮರ್ಪಿಸಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದ್ರೆ ದರಿದ್ರ ಗ್ಯಾರಂಟಿ