Select Your Language

Notifications

webdunia
webdunia
webdunia
webdunia

ಆ ಜನರು ಕಚೇರಿಗೆ ಬೀಗ ಹಾಕಿ ಮಾಡಿದ್ದೇನು?

ಆ ಜನರು ಕಚೇರಿಗೆ ಬೀಗ ಹಾಕಿ ಮಾಡಿದ್ದೇನು?
ಯಾದಗಿರಿ , ಮಂಗಳವಾರ, 25 ಜೂನ್ 2019 (16:54 IST)
ಅಲ್ಲಿನ ಜನರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಹೈಕೋರ್ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಶಾಶ್ವತ ಕುಡಿಯುವ  ನೀರಿಗಾಗಿ  ಧರಣಿ ಸತ್ಯಾಗ್ರಹ  ಮಾಡಲಾಯಿತು.

ಗ್ರಾಮದ ಜನರೆಲ್ಲಾ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಶರಣುರಡ್ಡಿ ಹತ್ತಿಗುಡೂರ, ರಂಗನಾಥ್ ಬಾಗಿಲಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಕಚೇರಿಗೆ ಬೀಗ ಹಾಕಿದು.  ಪ್ರತಿಭಟನೆ ಬಳಿಕ ಮನವಿ  ಪತ್ರವನ್ನು ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸಲ್ಲಿಸಲಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ನಿರುದ್ಯೋಗಿಗಳಿಗೆ ಬಂಪರ್ : ಬೃಹತ್ ಉದ್ಯೋಗ ಮೇಳ