Select Your Language

Notifications

webdunia
webdunia
webdunia
webdunia

ಕಲಬುರಗಿಯಲ್ಲಿ ಡಿಸಿಎಂ ಮಾಡಿದ್ದೇನು?

ಉಪಚುನಾವಣೆ
ಕಲಬುರಗಿ , ಶುಕ್ರವಾರ, 17 ಮೇ 2019 (16:42 IST)
ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೈ ಪಡೆ ವಿವಿಧ ಸಮುದಾಯಗಳ ಮೊರೆ ಹೋಗಿದೆ.

ಕಲಬುರ್ಗಿಯ ಗ್ರ್ಯಾಂಡ್ ಹೋಟೆಲ್ ನಲ್ಲಿ ಸವಿತಾ ಸಮಾಜದ ಸಭೆ ನಡೆಸಲಾಯಿತು. ಸವಿತಾ ಸಮಾಜದ ಮುಖಂಡರ ಜೊತೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ರು.

ಡಿಸಿಎಂ ಜಿ.ಪರಮೇಶ್ವರ, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಉಪಸ್ಥಿತಿ ಇದ್ರು.
ಚಿಂಚೋಳಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರದ ಭಾಗವಾಗಿ ಈ ಸಭೆಯನ್ನು ಕೈ ಪಡೆ ನಡೆಸಿತು.

ತಮ್ಮ ಅಹವಾಲುಗಳನ್ನು ಹೇಳೋದಾಗಿ ತಿಳಿಸಿದ್ದರಿಂದ ಸವಿತಾ ಸಮಾಜದ ಸಭೆ ಮಾಡುತ್ತಿದ್ದೇವೆ. ಈ ವೇಳೆ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆಯೂ ಮನವಿ ಮಾಡಲಾಗುವುದು ಅಂತ ಡಿಸಿಎಂ ಪರಮೇಶ್ವರ ಹೇಳಿಕೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

2000 ರೂ. ಚಿಲ್ಲರೆ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ: ಶಾಕಿಂಗ್