Select Your Language

Notifications

webdunia
webdunia
webdunia
webdunia

BSY ನಮ್ಮ ನಾಯಕರಲ್ಲ ಎಂದವರಿಗೆ ಸಿಎಂ ಹೇಳಿದ್ದೇನು?

BSY ನಮ್ಮ ನಾಯಕರಲ್ಲ ಎಂದವರಿಗೆ ಸಿಎಂ ಹೇಳಿದ್ದೇನು?
ಬೆಂಗಳೂರು , ಸೋಮವಾರ, 1 ಜೂನ್ 2020 (19:50 IST)
ಬಿ.ಎಸ್.ಯಡಿಯೂರಪ್ಪ ರಾಜ್ಯದ ಸಿಎಂ. ನಮ್ಮ ನಾಯಕರಲ್ಲ ಎಂದ ಬಿಜೆಪಿ ಶಾಸಕರ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಸರಕಾರದ ಆಡಳಿತ ಅವಧಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ, ಯೋಜನೆಗಳನ್ನು ಮುಕ್ತಕಂಠದಿಂದ ಬಿ.ಎಸ್.ಯಡಿಯೂರಪ್ಪ ಶ್ಲಾಘಿಸಿದ್ದಾರೆ.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈಚೆಗೆ ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕರಲ್ಲ ಎಂದು ಪರೋಕ್ಷವಾಗಿ ಹೇಳಿದ್ದಕ್ಕೆ ಸಿಎಂ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಮಾತನಾಡೋದಿಲ್ಲ ಎಂದಿದ್ದಾರೆ ಸಿಎಂ.

ಕೊರೊನಾ ವೈರಸ್ ತಡೆಗಾಗಿ ಸರಕಾರ ಹೋರಾಟ ನಡೆಸುತ್ತಿದ್ದು, ತಾವು ಅದರ ಹೊರತು ಬೇರೆ ವಿಷಯದ ಬಗ್ಗೆ ಮಾತನಾಡೋದಿಲ್ಲ.

ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಅನುದಾನ ಕಡಿಮೆ ಬಿಡುಗಡೆಯಾಗಿರಬಹುದು. ಮುಂದೆ ಹೆಚ್ಚು ಅನುದಾನ ಬಿಡುಗಡೆಯಾಗಬಹುದು ಎಂದು ಸಿಎಂ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಪದಗ್ರಹಣ ಮುಂದೂಡಿಕೆ : ಬಿಜೆಪಿ ವಿರುದ್ಧ ಡಿಕೆಶಿ ಪರೋಕ್ಷ ವಾಗ್ದಾಳಿ