Select Your Language

Notifications

webdunia
webdunia
webdunia
webdunia

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ : ಯತ್ನಾಳ್ ಸಾರಥ್ಯದಲ್ಲಿ ಗುಪ್ತ ಗುಪ್ತ ಸಭೆ

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ : ಯತ್ನಾಳ್ ಸಾರಥ್ಯದಲ್ಲಿ ಗುಪ್ತ ಗುಪ್ತ ಸಭೆ
ಬೆಂಗಳೂರು , ಶುಕ್ರವಾರ, 29 ಮೇ 2020 (19:23 IST)
ಬಿಜೆಪಿಗೆ ಇದೀಗ ಕಮಲ ಪಾಳೆಯದ ಕೆಲವು ಶಾಸಕರೇ ಬಂಡಾಯದ ಹಾದಿ ತುಳಿದಿರುವುದು ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ.

ಒಂದೆಡೆ ಕೊರೊನಾ ವೈರಸ್ ತಡೆ ವಿರುದ್ಧ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಕಾರ್ಯಾಚರಣೆ ಮುಂದುವರಿಸಿದ್ದರೆ, ಇನ್ನೊಂದೆಡೆ ಸ್ವಪಕ್ಷದಲ್ಲೇ ಒಂದಷ್ಟು ಶಾಸಕರು ಗುಪ್ತ ಸಭೆ ನಡೆಸಿರುವುದು ಅನುಮಾನಕ್ಕೆ ಕಾರಣವಾಗಿದೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಬಹುತೇಕ ಶಾಸಕರು ಸಭೆಯಲ್ಲಿ ಇದ್ದರು.
webdunia

ಕ್ಷೇತ್ರದ ಸಮಸ್ಯೆ, ಅನುದಾನ, ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಮನ್ನಣೆ ನೀಡುತ್ತಿಲ್ಲ ಎಂದು ಸಭೆಯಲ್ಲಿ ಕೆಲವರು ಅಸಮಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ವಿಜಯಪುರ, ಕಲಬುರಗಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಬಿಜೆಪಿ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಅಂತರದಿಂದ ಬಸ್ ಸಂಚಾರ ನಷ್ಟದಲ್ಲಿ!