Select Your Language

Notifications

webdunia
webdunia
webdunia
webdunia

ಬಿಜೆಪಿ ಸಂಸದರ ಮಾತಿಗೆ ಮಹಿಳಾ ಅಧಿಕಾರಿ ಮಾಡಿದ್ದೇನು?

ಬಿಜೆಪಿ ಸಂಸದರ ಮಾತಿಗೆ ಮಹಿಳಾ ಅಧಿಕಾರಿ ಮಾಡಿದ್ದೇನು?
ಕಲಬುರಗಿ , ಸೋಮವಾರ, 20 ಜುಲೈ 2020 (20:52 IST)
ಬಿಜೆಪಿ ಸಂಸದರ ಮಾತಿಗೆ ಮಹಿಳಾ ಅಧಿಕಾರಿ ತ್ವರಿತವಾಗಿ ಸ್ಪಂದನೆ ಮಾಡಿದ್ದಾರೆ.

ಇಎಸ್ಐಸಿ ಕಲಬುರಗಿಯಲ್ಲಿ ಕೋವಿಡ್ 19 ಟೆಸ್ಟಿಂಗ್ ಲ್ಯಾಬ್ ಕೇಂದ್ರವನ್ನು ಪ್ರಾರಂಭಿಸುವಲ್ಲಿನ ವಿಳಂಬದಿಂದಾಗಿ, ಸಂಸದ ಡಾ.ಉಮೇಶ್ ಜಾಧವ್ ಅವರು ನವದೆಹಲಿಯಲ್ಲಿ ಡಿಜಿ (ಉಸ್ತುವಾರಿ) ಇಎಸ್ಐಸಿ ಅನುರಾಧಾ ಪ್ರಸಾದ್ ಅವರನ್ನು ಭೇಟಿ ಮಾಡಿದ್ದರು.

ಇಎಸ್ಐಸಿ ಕಲಬುರಗಿಯಲ್ಲಿ COVID 19 ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಲು ಉಪಕರಣಗಳು ಮತ್ತು ಅಗತ್ಯ ವಸ್ತುಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು  ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಲು ಕೋರಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಡಿಜಿ ಇಎಸ್ಐಸಿ ರವರು ಲ್ಯಾಬ್ ಬೇಗನೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ಭರವಸೆ ನೀಡಿದ್ದಾರೆ. ಇದಕ್ಕಾಗಿ ಈಗಾಗಲೇ ಅಗತ್ಯ ಹಣವನ್ನು ಕಲ್ಪಿಸಲಾಗಿದೆ ಎಂದಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ 2 ನೇ ಪೂರ್ಣ ಪ್ರಮಾಣದ ಕೋವಿಡ್ 19 ಪರೀಕ್ಷಾ ಕೇಂದ್ರವು ಶೀಘ್ರದಲ್ಲೇ ಕಲಬುರಗಿ ಜಿಲ್ಲೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು ಸಂಸದ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಲಂಚ ಸ್ವೀಕರಿಸುತ್ತಿದ್ದ ತಹಸೀಲ್ದಾರ್ ಗೆ ಆಗಿದ್ದೇನು?