Publish Date: Sat, 18 Jul 2020 (15:57 IST)
Updated Date: Sat, 18 Jul 2020 (15:59 IST)
ಕೋವಿಡ್ ಪರೀಕ್ಷೆ ಮಾಡಲಾಗುತ್ತಿರುವ ಆಸ್ಪತ್ರೆಯೊಂದರಲ್ಲಿ ಹಂದಿಗಳ ಹಿಂಡು ರೋಗಿಗಳಿಗೆ ಇನ್ನಿಲ್ಲದ ಕಾಟ ಕೊಡುತ್ತಿದ್ದವು.
ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಡಿ.ಸಿ. ಬಿ.ಶರತ್ ಹಠಾತ್ ಭೇಟಿ ನೀಡಿದರು. ಆಗ ಜಿಮ್ಸ್ ಆವರಣದಲ್ಲಿದ್ದ ಹಂದಿಗಳ ಸ್ಥಳಾಂತರಕ್ಕೆ ಸೂಚನೆ ಕೊಟ್ಟರು.
ಹಂದಿ ಸ್ಥಳಾಂತರಕ್ಕೆ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಪರಿಣಾಮ ಕೆಲವು ಹಂದಿಗಳನ್ನು ಅವುಗಳ ಮಾಲೀಕರು ಬಲೆ ಬೀಸಿ ಹಿಡಿದುಕೊಂಡರು.
ಹಂದಿ ಸಾಕಾಣಿಕೆ, ಮಾಲೀಕರ ಮೇಲೆ ಎಫ್.ಐ.ಆರ್ ದಾಖಲಿಸಲು ಡಿ.ಸಿ.ಶರತ್ ಬಿ. ಅವರು ಜಿಮ್ಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.