Publish Date: Sat, 14 Jan 2023 (08:48 IST)
Updated Date: Sat, 14 Jan 2023 (08:27 IST)
ಬೆಂಗಳೂರು : ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಜೆಡಿಎಸ್, ಬಿಜೆಪಿ ಪಣ ತೊಟ್ಟಿದ್ದು ಪ್ರತಿಷ್ಠೆಯ ವಿಷಯವಾಗಿದೆ.
ಹೀಗಾಗಿ ಜೆಡಿಎಸ್, ಬಿಜೆಪಿ ಒಳ ಮೈತ್ರಿ ಮಾಡಿಕೊಂಡು ಹೊಡೆತ ನೀಡುವ ಭಯ ಸಿದ್ದರಾಮಯ್ಯಗೆ ಎದುರಾಗಿದೆ. ಕೋಲಾರ ಮತ್ತೊಂದು ಚಾಮುಂಡೇಶ್ವರಿ ಉಪ ಸಮರದಂತಾಗುವ ಭೀತಿ ಸೃಷ್ಟಿಯಾಗಿದೆ.
ಕೋಲಾರ ಜಿಲ್ಲಾ ಕಾಂಗ್ರೆಸ್ನಲ್ಲಿರಮೇಶ್ಕುಮಾರ್, ಕೆಹೆಚ್ ಮುನಿಯಪ್ಪ ಮಧ್ಯೆ ವೈಮನಸ್ಸು ಇಲ್ಲ ಎಂದು ನಾಯಕರು ಹೇಳುತ್ತಿದ್ದಾರೆ. ಆದರೆ ಶಮನ ಬಗೆ ಹರಿದಿಲ್ಲ ಎಂಬ ಮಾತು ವ್ಯಕ್ತವಾಗುತ್ತಿದೆ. ಒಂದು ವೇಳೆ ಚುನಾವಣೆಯ ವೇಳೆ ಶಮನ ಬಗೆ ಹರಿಯದೇ ಇದ್ದರೆ ಸಿದ್ದರಾಮಯ್ಯನವರಿಗೆ ಇದೇ ತಿರುಗುಬಾಣವಾಗುವ ಸಾಧ್ಯತೆಯಿದೆ.