Select Your Language

Notifications

webdunia
webdunia
webdunia
webdunia

ರಾಮನಗರ ಜಿಲ್ಲೆ ಬೆಂಗಳೂರು ದಕ್ಷಿಣ ಎಂದು ನಾಮಕರಣವಾಗಿರುವುದರಿಂದ ಲಾಭವೇನುಮ ನಷ್ಟವೇನು

Bengaluru South

Krishnaveni K

ಬೆಂಗಳೂರು , ಶುಕ್ರವಾರ, 23 ಮೇ 2025 (09:56 IST)
Photo Credit: X
ಬೆಂಗಳೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಿರುವುದರಿಂದ ಆಗಿರುವ ಲಾಭ ಮತ್ತು ನಷ್ಟವೇನು ಇಲ್ಲಿದೆ ಡೀಟೈಲ್ಸ್.

ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ನಿನ್ನೆ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗಿದೆ. ಇದರ ಬೆನ್ನಲ್ಲೇ ಕೆಲವರು ಇದಕ್ಕೆ ಸಂತೋಷ ವ್ಯಕ್ತಪಡಿಸಿದ್ದರೆ ಮತ್ತೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಇದರ ಲಾಭ ಮತ್ತು ನಷ್ಟವೇನು ಇಲ್ಲಿದೆ ವಿವರ.

ಲಾಭವೇನು?
-ಬೆಂಗಳೂರು ಹೆಸರು ಉದ್ಯಮಿಗಳನ್ನು ಆಕರ್ಷಿಸಬಹುದು. ರಾಮಗರನ ಜಿಲ್ಲೆಯಲ್ಲಿ ಇನ್ನು ಹೊಸ ಉದ್ಯಮಗಳು ತಲೆಯೆತ್ತಬಹುದು. ಇದರಿಂದ ಉದ್ಯೋಗ ಸೃಷ್ಟಿಯಾಗಬಹುದು.
-ಐಟಿ, ಬಿಟಿ ಕಂಪನಿಗಳು ತಲೆಯೆತ್ತಬಹುದು.
-ಇಲ್ಲಿನ ಭೂಮಿ ಬೆಲೆ ಹೆಚ್ಚಳವಾಗಲಿದೆ. ಇದರಿಂದ ಭೂಮಿ ಹೊಂದಿರುವವರಿಗೆ ಲಾಭವಾಗಬಹುದು.
-ರೈಲು, ರಸ್ತೆ ಸೇರಿದಂತೆ ಮೂಲಸೌಕರ್ಯಾಭಿವೃದ್ಧಿಯಾಗಲಿದೆ.

ನಷ್ಟವೇನು?
-ಶಾಂತವಾಗಿರುವ ರಾಮನಗರ ಇನ್ನು ನಗರವಾಗಿ ಬದಲಾಗುವುದರಿಂದ ಟ್ರಾಫಿಕ್, ವಾತಾವರಣ ಹಾಳಾಗಬಹುದು.
-ಇಲ್ಲಿ ಈಗಾಗಲೇ ಕೃಷಿಯನ್ನು ನೆಚ್ಚಿಕೊಂಡಿರುವ ರೈತರು, ಭೂ ಮಾಲಿಕರಿಗೆ ತೊಂದರೆಯಾಗಬಹುದು.
-ಕೈಗಾರೀಕರಣದಿಂದಾಗಿ ಕೃಷಿ ನಶಿಸಿ, ವಾತಾವರಣ ಹಾಳಾಗಬಹುದು.
-ರಸ್ತೆ, ಮೂಲಸೌಕರ್ಯಾಭಿವೃದ್ಧಿಗಾಗಿ ಹಲವರು ಭೂಮಿ ಕಳೆದುಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಈ ಬಾರಿ ಮುಂಗಾರು ಹೊಸ ದಾಖಲೆ ಮಾಡಲಿದೆ, ಏನಿದರ ವಿಶೇಷ ನೋಡಿ