Select Your Language

Notifications

webdunia
webdunia
webdunia
webdunia

ರಕ್ಷಣೆಗೆ ಸಾಥ್ ನೀಡದ ಹವಾಮಾನ

ಹವಾಮಾನ
ರಾಜ್ಯದ ಹಲವೆಡೆ ಮಳೆ ಮುಂದುವರಿದಿರುವಂತೆ ಪ್ರವಾಹ ಪರಿಸ್ಥಿತಿ ಇನ್ನೂ ಕೊನೆಗೊಂಡಿಲ್ಲ. ಏತನ್ಮಧ್ಯೆ ಹವಾಮಾನ ವೈಪರೀತ್ಯವು ಪರಿಹಾರ ಕಾರ್ಯಾಚರಣೆ ಅಡ್ಡಿಯಾಗಿದೆ.

ಮಡಿಕೇರಿ, ಕೊಡಗು  ಸೇರಿದಂತೆ ಮೊದಲಾದ ಜಲ ಪ್ರಳಯದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಬಿರುಸಿನ ಪ್ರಯತ್ನ ಮುಂದುವರಿದಿದೆ. ಈ ನಡುವೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಕಾರ್ಯಾಚರಣೆ ನಡೆಸಲು ಪ್ರತಿಕೂಲ ಹವಾಮಾನ ತಡೆಯೊಡ್ಡುತ್ತಿದೆ. ಹೀಗಾಗಿ ಪರಿಹಾರ ಕಾರ್ಯಾಚರಣೆಗೆ ತಾತ್ಕಾಲಿಕ ಅಡ್ಡಿಯುಂಟಾಗುತ್ತಿದೆ.

ಮಡಿಕೇರಿಯಲ್ಲಂತೂ ನೀರು ಹಾಗೂ ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಲು ಸೇನೆ ಹಾಗೂ ಎನ್ ಡಿ ಆರ್ ಎಫ್ ತಂಡಗಳು ನಿರತವಾಗಿವೆ. ಬಹುತೇಕ ಗ್ರಾಮಗಳ ರಸ್ತೆಗಳ ಸಂಚಾರ ಬಂದ್ ಆಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ ರಾಜ್ಯದ ಎಲ್ಲ ಆಶ್ರಯಧಾಮಗಳಲ್ಲಿ ಅತ್ಯಾಚಾರ!