Webdunia - Bharat's app for daily news and videos

Install App

ಹಣಕ್ಕಾಗಿ ಚಿನ್ನದಂಗಡಿ ಮಾಲೀಕನಿಗೆ ಆವಾಜ್

Webdunia
ಶುಕ್ರವಾರ, 17 ಫೆಬ್ರವರಿ 2023 (20:20 IST)
ಚಿನ್ನದಂಗಡಿ ನಡೆಸುವವನು ಅಂದ್ರೆ ಭಾರೀ ಕುಳ ಇರ್ಬೇಕು ಅಂತ ಅನ್ನಿಸುತ್ತೆ.. ಚಿನ್ನದಂಗಡಿಯವನು ಹಣವಂತ ಎಂದೇ ಭಾವಿಸಿದ ಆಸಾಮಿ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಿದ್ದ.‌ ಹಣ ಕೊಡು ಇಲ್ಲ ಹೆಣ ಬೀಳಿಸ್ತೀನಿ ಎಂದವ ಮಾಡಿದ್ದ ಕೀಚಕ ಕೃತ್ಯ.ಅದು ಫೆಬ್ರವರಿ 12 ರ ಭಾನುವಾರ.ಬೆಳಗ್ಗೆ 10 ಗಂಟೆ 5 ನಿಮಿಷದ ಸಮಯ.ಗಿರಿನಗರ ಏರಿಯಾದ ಜನರು ಸಂಡೇ ಗುಂಗಲ್ಲಿದ್ರು.ಅಷ್ಟರಲ್ಲಾಗಲೇ..ಕೈಯಲ್ಲಿ ಪೆಟ್ರೋಲ್ ಬಾಟಲಿ‌ ಹಿಡಿದು ಬಂದಿದ್ದ ಆಸಾಮಿಯೊಬ್ಬ ಜ್ಯೂಯಲ್ಲರಿ ಅಂಗಡಿಗೆ ಪೆಟ್ರೋಲ್ ಸುರಿದು ಕಡ್ಡಿ ಗೀಚಿ ಬೆಂಕಿ ಇಟ್ಟೇಬಿಟ್ಟಿದ್ದ.ಬಸವರಾಜು ಅಲಿಯಾಸ್ ಬೆಂಕಿ ಬಸವ.. ಹಣಕ್ಕಾಗಿ ಡಿಮ್ಯಾಂಡ್ ಮಾಡೋದು ಹೆದರಿಸೋದು ಜೀವ ಬೆದರಿಕೆ ಹಾಕಿ ಹಣ ಕೀಳುವ ಕಾಯಕ‌ ಮಾಡ್ತಿದ್ದ ಕೀಚಕ‌‌.. ಗಿರಿನಗರದ ಸಂತೋಷ್ ಬ್ಯಾಂಕರ್ಸ್ ಅಂಡ್ ತುಳಸಿ ಜ್ಯವೆಲ್ಲರಿ ಅಂಗಡಿಯ ಮಾಲೀಕ ಭವರ್ ಲಾಲ್ ಎಂಬುವವರಿಗೂ ಹಣಕ್ಕಾಗಿ ಕಾಡುತ್ತಿದ್ದ.‌ ಭವರ್ ಲಾಲ್ ಹಣ ನೀಡಲು ಒಪ್ಪದಿದ್ದಾಗ ಎರಡು ಲೀಟರ್ ಪೆಟ್ರೋಲ್ ತಂದು ಅಂಗಡಿ ಮಾಲೀಕನಿಗೂ ಸೇರಿದಂತೆ ಅಂಗಿಡಗೆ ಬೆಂಕಿ ಹಚ್ಚಿದ್ದು ಇದೇ ಬಸವ..ಸದ್ಯ ಬಸವರಾಜು ಅಲಿಯಾಸ್ ಬೆಂಕಿ ಬಸವ  ಗಿರಿಬಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ತಾನೊಂದು ಬಗೆದರೆ ದೈವವೊಂದು ಬಗೆಯುತ್ತೆ ಎನ್ನುವಂತೆ ಬಸವರಾಜ್ ಚಿನ್ನದಂಗಡಿ ಮಾಲೀಕ ಭವರ್ ಲಾಲ್ ಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದ.. ಆದರೆ ಅದೇ ಬೆಂಕಿ ಬಸವರಾಜನ ಕೈಯನ್ನು ಸುಟ್ಟಿತ್ತು.‌ ಕೈ ಸುಟ್ಟುಕೊಂಡ ಬಸವರಾಜು ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೇ ಪೊಲೀಸರು ಲಾಕ್ ಮಾಡಿದ್ದಾರೆ.. ಹಣಕ್ಕಾಗಿ ಕ್ಯಾತೆ ತೆಗೆದವನು ಜೈಲು ಸೇರಿದ್ದಾನೆ.ಸದ್ಯ ಚಿನ್ನದಂಗಡಿ ಮಾಲೀಕ ಭವರ್ ಲಾಲ್ ಸಹ ಸುಧಾರಿಸಿಕೊಂಡಿದ್ದಾರೆ.. ಆದರೆ ಹಣಕ್ಕಾಗಿ ಕೊಲ್ಲಲು ಕೋದ ಬೆಂಕಿ ಬಸವ ತಾನು ಕೃಷ್ಣನ ಜನ್ಮ ಸ್ಥಾನ ಸೇರಿದ್ದಾನೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ಈ ದುರಂತ ದಿಗ್ಭ್ರಮೆಗೊಳಿಸಿದೆ, ಮೋದಿ ಭಾವುಕ ಪೋಸ್ಟ್‌

Air India Plane Crash: ಕೊನೇ ಕರೆ ಮಾಡಿದ ಪೈಲಟ್ ಹೇಳಿದ್ದೇನು

Bengaluru Stampede: ವಿರಾಟ್ ಕೊಹ್ಲಿ ಸ್ನೇಹಿತನಿಗೆ ಬಿಗ್‌ ರಿಲೀಫ್‌

ವಾರದ ಹಿಂದೆಯಷ್ಟೇ ಮುಂಬಡ್ತಿ ಪಡೆದಿದ್ದ ಡಿ ರೂಪಾ ಸೇರಿ ಹಲವು ಅಧಿಕಾರಿಗಳ ವರ್ಗಾವಣೆ

Raja Raghuvanshi murder case: ಮೇಘಾಲಯ SIT ಸೋನಮ್ ಮುಂದಿಡುವ ಪ್ರಶ್ನೆಗಳು ಹೀಗಿದೆ

ಮುಂದಿನ ಸುದ್ದಿ
Show comments