Publish Date: Sat, 20 Jun 2020 (17:21 IST)
Updated Date: Sat, 20 Jun 2020 (17:22 IST)
ಕೋವಿಡ್-19 ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದವರ ಮೇಲೆ 9 ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಇದುವರೆಗೆ ರಾಯಚೂರು ಜಿಲ್ಲೆಯಲ್ಲಿ 16 ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡು 17 ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕ್ವಾರಂಟೈನ್ ಒಳಗಾದವರು ಹೊರ ಬರದೆ ಕ್ವಾರಂಟೈನ್ ನಲ್ಲಿಯೇ ಇದ್ದು ಅವಧಿ ಮುಗಿಯುವವರೆಗೂ ಸರ್ಕಾರಿ ಆದೇಶ ಪಾಲನೆ ಮಾಡಲು ಸೂಚಿಸಲಾಗಿದೆ.
ರಾಯಚೂರು ಜಿಲ್ಲೆಯ ಸೆನ್ ಪೊಲೀಸ್ ಠಾಣೆಯಲ್ಲಿ ಒಟ್ಟು 4 ಎಟಿಎಮ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದು , 2 ಜನ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಎಟಿಎಮ್ ನಕಲು ಮಾಡಿ ಕಳ್ಳತನ ಮಾಡಿ ಉಳಿತಾಯ ಖಾತೆಯ 2,81,069 ರೂಪಾಯಿ ಹಣವನ್ನು ನಕಲಿ ಎಟಿಎಮ್ ಬಳಸಿ ಉತ್ತರ ಪ್ರದೇಶ ಮೂಲದವರಾದ ಹರಿಲಾಲ್ 28 ವರ್ಷ, ಬ್ರಿಜವಾನ್ 27 ವರ್ಷ ಇವರು ಹಲವಾರು ನಕಲಿ ಎಟಿಎಮ್ ಬಳಸಿ ಕಳ್ಳತನ ಮಾಡಿರುವುದು ಕಂಡು ಬಂದಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.