Select Your Language

Notifications

webdunia
webdunia
webdunia
webdunia

ಆರ್‍ಟಿಓ ಕಚೇರಿ ಬಾಗಿಲು ಮುಚ್ಚಿದ ವಾಹನ ಸವಾರರು: ಕಾರಣ ಗೊತ್ತಾ?

ಆರ್‍ಟಿಓ ಕಚೇರಿ ಬಾಗಿಲು ಮುಚ್ಚಿದ ವಾಹನ ಸವಾರರು: ಕಾರಣ ಗೊತ್ತಾ?
ಚಿತ್ರದುರ್ಗ , ಮಂಗಳವಾರ, 26 ಜೂನ್ 2018 (17:17 IST)
ಆರ್‍ಟಿಓ ಕಚೇರಿಯ ವೇಳೆಯಲ್ಲಿಯೇ ಮುಖ್ಯದ್ವಾರವನ್ನು ಮುಚ್ಚಿ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸರ್ವರ್ ಪ್ರಾಬ್ಲಂ ನೆಪ ಹೇಳಿ ಅಧಿಕಾರಿಗಳು ವಾಹನ ನೊಂದಣಿ ಮಾಡಲು ನಿರಾಕರಿಸುತ್ತಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ವಾಹನಗಳ ಸವಾರರು ಕಚೇರಿಯ ಬಾಗಿಲು ಮುಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಅಂದಹಾಗೆ ಚಿತ್ರದುರ್ಗ ಆರ್ ಟಿ ಓ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಆರ್ ಟಿ ಓ ಕಚೇರಿಯಲ್ಲಿ ಯಾರೂ ಕೆಲಸ ಮಾಡದಂತೆ ಬಾಗಿಲನ್ನು ವಾಹನಗಳ ಸವಾರರು ಬಂದ್ ಮಾಡಿ ಬಿಸಿ ಮುಟ್ಟಿಸಿದರು.

ಸಾರಥಿ-4 ಮೂಲಕ ಆನ್ ಲೈನ್ ನೊಂದಣಿಯಲ್ಲಿ ವ್ಯತ್ಯಾಸವಾಗಿದೆ. ಅಲ್ಲದೇ ನೂತನ ನೊಂದಣಿ ಸಾರಥಿ-4 ಎಂದು ಸರಕಾರ ಆದೇಶ ಮಾಡಿತ್ತು. ಆದರೆ ಆರ್ ಟಿ ಓ ಕಚೇರಿ ಸಿಬ್ಬಂದಿ ವಾಹನಗಳ ನೊಂದಣಿ ಮಾಡುವುದನ್ನು ಬಿಟ್ಟು ಸರ್ವರ್ ಪ್ರಾಬ್ಲಂ ಎಂದು ಹೇಳುತ್ತಿದ್ದರು. ಹೀಗಾಗಿ ವಾಹನಗಳ ಸವಾರರು ಕೆಲಕಾಲ ಗರಂ ಆಗಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ತಪ್ಪು ಮಾಡಿದ್ದರೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗೋಣ ಎಂದ ಸಚಿವ ಡಿಕೆಶಿ!