ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲ್ಲೆ ಗಗನಕ್ಕೇರುತ್ತಿರೋ ತರಕಾರಿ ಬೆಲೆಗಳು

Webdunia
ಭಾನುವಾರ, 27 ಆಗಸ್ಟ್ 2023 (15:44 IST)
ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ದಿನ ಬಳಕೆ ವಸ್ತುಗಳ ದರ ಹೆಚ್ಚಾಗ್ತಿದೆ.ಮಾರುಕಟ್ಟೆಗಳಲ್ಲಿ ದಿನಬಳಕೆ ವಸ್ತುಗಳ ದರ ಕೇಳಿ ಗ್ರಾಹಕರಿಗೆ ಶಾಕ್ ಆಗಿದ್ದಾರೆ.ಇಷ್ಟು ದಿನ ಟೊಮೇಟೊ ಆಯ್ತು ಇದೀಗ ಬೇಳೆ ಕಾಳುಗಳು ಹಾಗೂ ಈರುಳ್ಳಿ ದರದಲ್ಲಿ ಏರಿಕೆ ಆಯ್ತು.ಇದೀಗ ದಿನದಿಂದ ದಿನಕ್ಕೆ ಕ್ರಮೇಣವಾಗಿ ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಆಗ್ತಾ ಇದೆ.ರಾಜ್ಯದಲ್ಲಿ ಮೇಲಿಂದ ಮೇಲೆ ಬೆಲೆ ಏರಿಕೆಗಳಿಂದ ಜನ ತತ್ತರಿಸುತ್ತಿದ್ದಾರೆ.ರಾಜ್ಯದಲ್ಲಿ ಮುಂಗಾರು ಕೊರತೆ ಇಂದ ದರ ಏರಿಕೆ ಬರೆಗೆ ಮೂಲ ಕಾರಣವಾಗಿದೆ.ಮಾರುಕಟ್ಟೆಯಲ್ಲಿ ಕ್ರಮೇಣವಾಗಿ ಈರುಳ್ಳಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ.
 
ಮೊದ್ಲು 20 ರೂ ಕೆಜಿ ಇದ್ದ ಈರುಳ್ಳಿ ಇದೀಗ ಕೆಜಿಗೆ 50 ರಿಂದ 60 ರೂಪಾಯಿಯಾಗಿದೆ.ಇದರ ಜೊತೆ ಬೇಳೆ ಕಾಳುಗಳ ಬೆಲೆಯಲ್ಲೂ ಕೂಡ ದಿಢೀರ್ ಏರಿಕೆಕಂಡಿದೆ.ಹೆಸರುಕಾಳು ಈ ಮೊದಲು 100 ರೂಪಾಯಿ ಇತ್ತು. ಆದ್ರೆ ಈಗ 30 ರುಪಾಯಿ ಹೆಚ್ಚಳವಾಗಿದ್ದು ಸದ್ಯದ ಬೆಲೆ 130 ರೂಪಾಯಿ ಆಗಿದೆ.ತೊಗರಿ ಬೇಳೆ ಹಿಂದೆ 90 ರೂಪಾಯಿ ಇದ್ದಿದ್ದು, ಈಗ ಬರೋಬ್ಬರಿ 163 ರೂಪಾಯಿ ಆಗಿದೆ.ಹೆಸರು ಬೇಳೆ 95 ರೂಪಾಯಿ ಇದ್ದಿದ್ದು, ಈಗ 110ರೂಪಾಯಿಯಾಗಿದೆ.ಬಟಾಣಿ 60 ರೂಪಾಯಿ ಇದ್ದಿದ್ದು 90 ರೂಪಾಯಿ,ಕಾಬುಲ್ ಕಡಲೆ 120 ರೂಪಾಯಿ ಇದ್ದಿದ್ದು, 160 ರೂಪಾಯಿ ಆದ್ರೆ ಉದ್ದಿನ ಬೇಳೆ 100 ರೂಪಾಯಿ ಇದ್ದಿದ್ದು, 110 ರೂಪಾಯಿ ಆಗಿದೆ.ಮುಂದಿನ ದಿನಗಳಲ್ಲೂ ಇದೇರೀತಿಯಾಗಿ ರಾಜ್ಯದಲ್ಲಿ ಮಳೆ ಕೈ ಕೊಟ್ಟರೆ ಮತ್ತಷ್ಟು ಬೆಲೆಗಳು ಏರಿಕೆಯಾಗಲಿವೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರೈವೆಸಿಗೆ ಅಡ್ಡಿಯಾಗುತ್ತಾಳೆಂದು ಮಗಳನ್ನು ಮುಗಿಸಿದ ಮಲತಂದೆ ಕೊನೆಗೂ ಅರೆಸ್ಟ್‌

ಹಂಪಿಯಿಂದ ನಾಪತ್ತೆಯಾಗಿದ್ದ ಯುವಕ ಕೊನೆಗೂ ಪತ್ತೆ, ಎಲ್ಲಿ ಗೊತ್ತಾ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಮಹದೇವಪ್ಪರನ್ನು ಭೇಟಿಯಾಗಿ ನವೆಂಬರ್ ಕ್ರಾಂತಿ ಬಗ್ಗೆ ಪರಮೇಶ್ವರ್ ಸ್ಫೋಟಕ ಹೇಳಿಕೆ

Rain Alert, ದೇಶದ ಈ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ

ಮುಂದಿನ ಸುದ್ದಿ
Show comments