Webdunia - Bharat's app for daily news and videos

Install App

ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲ್ಲೆ ಗಗನಕ್ಕೇರುತ್ತಿರೋ ತರಕಾರಿ ಬೆಲೆಗಳು

Webdunia
ಭಾನುವಾರ, 27 ಆಗಸ್ಟ್ 2023 (15:44 IST)
ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ದಿನ ಬಳಕೆ ವಸ್ತುಗಳ ದರ ಹೆಚ್ಚಾಗ್ತಿದೆ.ಮಾರುಕಟ್ಟೆಗಳಲ್ಲಿ ದಿನಬಳಕೆ ವಸ್ತುಗಳ ದರ ಕೇಳಿ ಗ್ರಾಹಕರಿಗೆ ಶಾಕ್ ಆಗಿದ್ದಾರೆ.ಇಷ್ಟು ದಿನ ಟೊಮೇಟೊ ಆಯ್ತು ಇದೀಗ ಬೇಳೆ ಕಾಳುಗಳು ಹಾಗೂ ಈರುಳ್ಳಿ ದರದಲ್ಲಿ ಏರಿಕೆ ಆಯ್ತು.ಇದೀಗ ದಿನದಿಂದ ದಿನಕ್ಕೆ ಕ್ರಮೇಣವಾಗಿ ದಿನಬಳಕೆ ಪದಾರ್ಥಗಳ ಬೆಲೆ ಏರಿಕೆ ಆಗ್ತಾ ಇದೆ.ರಾಜ್ಯದಲ್ಲಿ ಮೇಲಿಂದ ಮೇಲೆ ಬೆಲೆ ಏರಿಕೆಗಳಿಂದ ಜನ ತತ್ತರಿಸುತ್ತಿದ್ದಾರೆ.ರಾಜ್ಯದಲ್ಲಿ ಮುಂಗಾರು ಕೊರತೆ ಇಂದ ದರ ಏರಿಕೆ ಬರೆಗೆ ಮೂಲ ಕಾರಣವಾಗಿದೆ.ಮಾರುಕಟ್ಟೆಯಲ್ಲಿ ಕ್ರಮೇಣವಾಗಿ ಈರುಳ್ಳಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ.
 
ಮೊದ್ಲು 20 ರೂ ಕೆಜಿ ಇದ್ದ ಈರುಳ್ಳಿ ಇದೀಗ ಕೆಜಿಗೆ 50 ರಿಂದ 60 ರೂಪಾಯಿಯಾಗಿದೆ.ಇದರ ಜೊತೆ ಬೇಳೆ ಕಾಳುಗಳ ಬೆಲೆಯಲ್ಲೂ ಕೂಡ ದಿಢೀರ್ ಏರಿಕೆಕಂಡಿದೆ.ಹೆಸರುಕಾಳು ಈ ಮೊದಲು 100 ರೂಪಾಯಿ ಇತ್ತು. ಆದ್ರೆ ಈಗ 30 ರುಪಾಯಿ ಹೆಚ್ಚಳವಾಗಿದ್ದು ಸದ್ಯದ ಬೆಲೆ 130 ರೂಪಾಯಿ ಆಗಿದೆ.ತೊಗರಿ ಬೇಳೆ ಹಿಂದೆ 90 ರೂಪಾಯಿ ಇದ್ದಿದ್ದು, ಈಗ ಬರೋಬ್ಬರಿ 163 ರೂಪಾಯಿ ಆಗಿದೆ.ಹೆಸರು ಬೇಳೆ 95 ರೂಪಾಯಿ ಇದ್ದಿದ್ದು, ಈಗ 110ರೂಪಾಯಿಯಾಗಿದೆ.ಬಟಾಣಿ 60 ರೂಪಾಯಿ ಇದ್ದಿದ್ದು 90 ರೂಪಾಯಿ,ಕಾಬುಲ್ ಕಡಲೆ 120 ರೂಪಾಯಿ ಇದ್ದಿದ್ದು, 160 ರೂಪಾಯಿ ಆದ್ರೆ ಉದ್ದಿನ ಬೇಳೆ 100 ರೂಪಾಯಿ ಇದ್ದಿದ್ದು, 110 ರೂಪಾಯಿ ಆಗಿದೆ.ಮುಂದಿನ ದಿನಗಳಲ್ಲೂ ಇದೇರೀತಿಯಾಗಿ ರಾಜ್ಯದಲ್ಲಿ ಮಳೆ ಕೈ ಕೊಟ್ಟರೆ ಮತ್ತಷ್ಟು ಬೆಲೆಗಳು ಏರಿಕೆಯಾಗಲಿವೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments