Webdunia - Bharat's app for daily news and videos

Install App

ಫೇಕ್ ನ್ಯೂಸ್ ತಡೆಯಲು ಕಾನೂನು ತರುತ್ತಿದ್ದೇವೆ-ಡಿಸಿಎಂ ಡಿಕೆಶಿವಕುಮಾರ್

Webdunia
ಭಾನುವಾರ, 27 ಆಗಸ್ಟ್ 2023 (15:00 IST)
ಫೇಕ್ ನ್ಯೂಸ್ ತಡೆಯಲು ಕಾನೂನು ತರುತ್ತಿದ್ದೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.ಸದಾಶಿವನಗರದಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಡಿಸಿಎಂ ಡಿಕೆಶಿವಕುಮಾರ್ ಭೇಟಿ ಮಾಡಿ ಸರ್ಕಾರದ ಹಲವು ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದರು‌.ನಂತರ ಮಾತನಾಡಿದ ಡಿಕೆಶಿವಕುಮಾರ್ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟ ವಿಚಾರವಾಗಿ ಚರ್ಚೆ ಮಾಡಿದ್ವಿ.ಬೆಂಗಳೂರಿನ ಒಂದಷ್ಟು ಕಾರ್ಯಕ್ರಮ ಬಗ್ಗೆ ಚರ್ಚೆ ‌ಮಾಡಿದ್ವಿ. ಬೆಂಗಳೂರಿನಲ್ಲಿ ವೈಪೈ ಜೋನ್ ಮಾಡ್ತಾ ಇದ್ದೇವೆ. ಫೇಕ್ ನ್ಯೂಸ್ ತಡೆಯಲು ಕಾನೂನು ತರುತ್ತಿದ್ದೇವೆ. ಗೃಹ ಇಲಾಖೆಯಿಂದ ‌ಈ ಕಾನೂನು ಆಗುತ್ತೆ. ಕೆಲ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಕೆಲ ನಾಯಕರ ಬಗ್ಗೆ ತೇಜೋವದೆ ಮಾಡಲಾಗುತ್ತಿದೆ. ಶೀಘ್ರದಲ್ಲೇ ಕಾನೂನು ತರುತ್ತೇವೆ ಎಂದು ಹೇಳಿದರು.
 
ಇನ್ನೂ ಸರ್ಕಾರಕ್ಕೆ 100 ದಿನಗಳ ಪೂರೈಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸರ್ಕಾರ ನೂರು ದಿನ ನಿಮ್ಮ ಕಣ್ಣಿಗೆ ಕಾಣುತ್ತಿದೆ.ಐದು ಗ್ಯಾರಂಟಿ ಜಾರಿ ತಂದಿದ್ದೇವೆ.ಯಾವ ಸರ್ಕಾರವು ದೇಶದಲ್ಲಿ ಮಾಡಿಲ್ಲ. ಇದಕ್ಕಿಂತ ಏನು ಬೇಕು.ಗೃಹಲಕ್ಷ್ಮಿ ಯೋಜನೆ ಜಾರಿ‌ ಮಾಡುತ್ತಿದ್ದೇವೆ.ಶಕ್ತಿ, ಗೃಹಜ್ಯೋತಿ,ಅನ್ನಭಾಗ್ಯ ಯೋಜನೆ ಜಾರಿಯಾಗಿದೆ.ಯುವನಿಧಿ ಡಿಸೆಂಬರ್ ಗೆ ಜಾರಿ‌ ಮಾಡುತ್ತೇವೆ.ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ.ಕಾಂಗ್ರೆಸ್ ‌ಕೊಟ್ಟ ಭರವಸೆ ಈಡೇರಿಸಿದೆ. ಸರ್ಕಾರಕ್ಕೆ ಸೆಂಚುರಿ ಆಗಿದೆ.ಹಾಫ್ ಸೆಂಚುರಿ ಅಲ್ಲ ಫುಲ್ ಸೆಂಚುರಿ ಆಗಿದೆ ಎಂದು ಸರ್ಕಾರ ನೂರು ದಿನ ಪೂರೈಸಿದಕ್ಕೆ ಸಂಭ್ರಮ ವ್ಯಕ್ತಪಡಿಸಿದರು.
 
೪೦% ಕಮಿಷನ್ ಆರೋಪ ಹಾಗೂ ಕೋವಿಡ್ ಹಗರಣ ತನಿಖೆಗೆ ವಹಿಸಿದ ವಿಚಾರವಾಗಿ ಮಾತನಾಡಿ ಈಗಾಗಲೇ ತನಿಖೆಗೆ ಕೊಟ್ಟಿದ್ದೇವೆ. ನಾನು ಈ ಬಗ್ಗೆ ಮಾತನಾಡಲ್ಲ, ಯಾರು ಮಾತನಾಡಬೇಕೋ ಅವರು ಮಾತನಾಡುತ್ತಾರೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗರ್ಭಕಂಠದ ಕ್ಯಾನ್ಸರ್​ ತಡೆಯಲು ಹೆಣ್ಣುಮಕ್ಕಳಿಗೆ ಹೆಚ್​ಪಿವಿ ಲಸಿಕೆ ನೀಡಲು ರಾಜ್ಯ ಸರ್ಕಾರ ನಿರ್ಧಾರ

ಆರ್ಥಿಕ ಒತ್ತಡ ಶಂಕೆ: ಪದಾರ್ಥ ಸೇವಿಸಿ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ

ಸಂಪ್ರದಾಯವನ್ನು ಒಪ್ಪಿಕೊಂಡು ಒಂದೇ ಯುವತಿಯನ್ನು ಅಪ್ಪಿಕೊಂಡ ಇಬ್ಬರು ಸಹೋದರರು

ಎರಡು ದಶಕಗಳ ಕಾಲ ಕೋಮಾದಲ್ಲಿದ್ದ ಸೌದಿ ಅರೇಬಿಯಾದ ರಾಜಕುಮಾರ ಸ್ಲೀಪಿಂಗ್ ಪ್ರಿನ್ಸ್ ನಿಧನ

ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆ ನಿರೀಕ್ಷೆ: ದಕ್ಷಿಣ ಕನ್ನಡ, ಉಡುಪಿಯಲ್ಲಿ ರೆಡ್‌ ಅಲರ್ಟ್‌ ಘೋಷಣೆ

ಮುಂದಿನ ಸುದ್ದಿ
Show comments