Webdunia - Bharat's app for daily news and videos

Install App

ವರಮಹಾಲಕ್ಷ್ಮಿ ಹಬ್ಬಕ್ಕೆ ದುಬಾರಿಯಾದ ಹಣ್ಣು, ತರಕಾರಿ: ಯಾವುದಕ್ಕೆ ಎಷ್ಟು ಇಲ್ಲಿದೆ ವಿವರ

Krishnaveni K
ಗುರುವಾರ, 15 ಆಗಸ್ಟ್ 2024 (09:38 IST)
ಬೆಂಗಳೂರು: ನಾಳೆ ವರಮಹಾಲಕ್ಷ್ಮಿ ಹಬ್ಬವಿದ್ದು, ಮಾರುಕಟ್ಟೆಯಲ್ಲಿ ಹೂವು, ಹಣ್ಣು, ತರಕಾರಿಗೆ ಭರ್ಜರಿ ಬೇಡಿಕೆಯಿದೆ. ಈ ಹಿನ್ನಲೆಯಲ್ಲಿ ಹಣ್ಣು-ತರಕಾರಿಗಳ ಬೆಲೆ ಗಗನಕ್ಕೇರಿದೆ.

ಪ್ರತೀ ಬಾರಿಯೂ ಹಬ್ಬ ಬಂತೆಂದರೆ ಸಾಕು ಹೂ,ಹಣ್ಣಿನ ಬೆಲೆ ಗನಕ್ಕೇರುತ್ತದೆ. ಈ ಬಾರಿ ಒಮ್ಮೆ ಮಳೆ ಅಭಾವ, ಇನ್ನೊಮ್ಮೆ ಅತಿ ವೃಷ್ಟಿಯಿಂದಾಗಿ ತರಕಾರಿಗಳ ಬೆಲೆ ಈಗಾಗಲೇ ಹೆಚ್ಚಳವಾಗಿದೆ. ಇದೀಗ ಹಬ್ಬದ ಸೀಸನ್ ಕೂಡಾ ಶುರುವಾಗಿದ್ದು ಮತ್ತಷ್ಟು ಬೆಲೆ ಏರಿಕೆಯಾಗಿದೆ. ಹೀಗಾಗಿ ಜನ ಸಾಮಾನ್ಯರು ಹಣ್ಣು-ತರಕಾರಿ ಕೊಳ್ಳಲು ಭಯಪಡುವಂತಾಗಿದೆ.

ಹೂವಿನ ಬೆಲೆ ಹೀಗಿದೆ
ಹಬ್ಬವಾಗಿರುವುದರಿಂದ ಮಾರುಕಟ್ಟೆಯಲ್ಲಿ ನಿನ್ನೆಯಿಂದಲೇ ಜನ ಹೂ ಖರೀದಿಗೆ ಮುಗಿಬಿದ್ದಿದ್ದಾರೆ. ಮಲ್ಲಿಗೆ ಹೂ 120-160, ಚೆಂಡು ಹೂ 150 ರೂ., ತಾವರೆ ಹೂ ಒಂದು ಜೋಡಿಗೆ 100 ರೂ., ಗುಲಾಬಿ 16-200 ರೂ., ಸೇವಂತಿಗೆ 500 ರೂ., ಕನಕಾಂಬರ 500 ರೂ. ಗಡಿ ದಾಟಿದೆ.
ತರಕಾರಿ
ತರಕಾರಿಯೂ ಹೂವಿನ ಬೆಲೆಗೆ ಪೈಪೋಟಿ ನೀಡುವಂತಿದೆ. ಈಗಾಗಲೇ ಇರುವ ಬೆಲೆಗಿಂತ 10-20 ರೂ.ಗಳಷ್ಟು ಎಲ್ಲಾ ತರಕಾರಿ ಬೆಲೆಯೂ ಹೆಚ್ಚಾಗಿದೆ. ಆಲೂಗಡ್ಡೆ 40, ಈರುಳ್ಳಿ 50, ಹಸಿಮೆಣಸಿನಕಾಯಿ 120, ಬದನೆ 80, ನಾಟಿ ಬೀನ್ಸ್ 200, ಕ್ಯಾರೆಟ್ 80, ಹಾಗಲಕಾಯಿ 60, ಬಟಾಣಿ 200, ಬೆಳ್ಳುಳ್ಳಿ 350, ಶುಂಠಿ 200, ಕೊತ್ತಂಬರಿ ಸೊಪ್ಪು ಕಟ್ಟಿಗೆ 40 ರೂ.ಗಳಷ್ಟು ಏರಿಕೆಯಾಗಿದೆ. ಇನ್ನು ಸೇಬು, ದ್ರಾಕ್ಷಿ, ದಾಳಿಂಬೆಯಂತಹ ಹಣ್ಣಿನ ಬೆಲೆಯೂ ಭಾರೀ ಏರಿಕೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಅಬ್ಬಾ.. ಚಿನ್ನದ ದರ ಇಷ್ಟೊಂದಾ ಎನ್ನುವಷ್ಟಾಗಿದೆ ನೋಡಿ

Air India Plane crash: ವಿಮಾನ ದುರಂತ ವೀಕ್ಷಿಸಿ ರೀಲ್ಸ್ ಮಾಡ್ತೀರಾ, ಸಚಿವ ರಾಮಮೋಹನ್ ನಾಯ್ಡುಗೆ ತರಾಟೆ

Air India plane crash: ವಿಮಾನ ಪತನಕ್ಕೆ ಇದೇ ಕಾರಣನಾ

Rahul Gandhi: ಅಪಘಾತವಾದ ವಿಮಾನದಲ್ಲಿ ನೀವಿರಬೇಕಿತ್ತು, ರಾಹುಲ್ ಗಾಂಧಿಗೆ ಹೇಳಿದ ಎಕ್ಸ್ ಬಳಕೆದಾರ

Air India Plane crash: ಬೆಳ್ಳಂ ಬೆಳಿಗ್ಗೆಯೇ ಅಹಮ್ಮದಾಬಾದ್ ಗೆ ಓಡೋಡಿ ಬಂದ ಮೋದಿ video

ಮುಂದಿನ ಸುದ್ದಿ
Show comments