Webdunia - Bharat's app for daily news and videos

Install App

ದೋಣಿಯ ಮೇಲೆ ವೀಣಾ ವಾದನ

Webdunia
ಶನಿವಾರ, 30 ಏಪ್ರಿಲ್ 2022 (20:17 IST)
ಶಾಸ್ತ್ರೀಯ ಸಂಗೀತಕ್ಕೆ ಅದರದೆ ಆದ ವೇದಿಕೆ, ನಿಯಮ ಇದೆ, ಹಾಗಾಗಿ ಎಲ್ಲೆಂದರಲ್ಲಿ ಹಾಡುವಂತಿಲ್ಲ. ಆದರೆ ನಿಯಮಕ್ಕೆ ಅನುಗುಣವಾಗಿ ತ್ರಿವೇಣಿ ಸಂಗಮದೊಂದಿಗೆ ಸಮುದ್ರ ರಾಜನಲ್ಲಿ ಲೀನವಾಗುವ ನದಿಯಲ್ಲಿ ದೋಣಿಯಲ್ಲಿ ವೀಣಾ ವಾದನ ಮಾಡಿ ಸರಸ್ವತೀ ಆರಾಧನೆ ಮಾಡಿದ್ದಾರೆ ರಾಷ್ಟ್ರಮಟ್ಟದ ಖ್ಯಾತಿಯ ವೀಣಾ ವಾದಕಿ ಉಡುಪಿಯ ವಿದುಷಿ ಪವನ ಆಚಾರ್ಯ. ಅವರು ಕೋಡಿಬೆಂಗ್ರೆಯ ಶ್ರೀ ದುರ್ಗಾದೇವಿ ಮಹಾಕಾಳಿ ಅಮ್ಮನವರ ದೇವಸ್ಥಾನದ 15 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವದಂದು ಈ ವಿಶೇಷ ವೀಣಾ ವಾದನ ಮಾಡಿದ್ದಾರೆ. ಸೀತಾ, ಸ್ವರ್ಣ ಮತ್ತು ಮಡಿಸಾಲು ನದಿಯ ಸಂಗಮ ಸ್ಥಳವಾದ ಕೋಡಿ ನದಿ ತೀರದಲ್ಲಿ ದೋಣಿಯಲ್ಲಿ ವೀಣಾ ವಾದನ ಮಾಡಲು ದೇವಸ್ಥಾನದ  ಸಂಘಟಕರು ವೇದಿಕೆಯೊಂದನ್ನು ಮಾಡಿದ್ದರು. ವಿದುಷಿ ಅವರಿಗೆ ತಬಲಾದಲ್ಲಿ ವಿದ್ವಾನ್ ಮಾಧವ ಆಚಾರ್ಯ, ಸಹ ವೀಣಾ ವಾದಕರಾಗಿ ವೈಭವ ಪೈ, ತಾಳದಲ್ಲಿ ಕುಮಾರಿ  ಜಾನ್ಹವಿ  ಸಹಕರಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ