Webdunia - Bharat's app for daily news and videos

Install App

ನೂತನ ಮನೆಗೆ ವಾಜಪೇಯಿ ಹೆಸರಿಟ್ಟು ಅಭಿಮಾನ ಮೆರೆದ ಚಾಲಕ!

Webdunia
ಶನಿವಾರ, 17 ನವೆಂಬರ್ 2018 (18:39 IST)
ಅಜಾತ ಶತೃ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಹೆಸರನ್ನ ತಮ್ಮ ನೂತನ ಮನೆಗೆ ಇಡುವ ಮೂಲಕ ಕಾರ್ ಚಾಲಕನೋರ್ವ ಆದರ್ಶ ಮೆರೆದ ಘಟನೆ ನಡೆದಿದೆ.

ಗದಗದ ಪಂಚಾಕ್ಷರಿ ನಗರದ ನಿವಾಸಿ ವೀರಭದ್ರಪ್ಪ ಡಂಬಳ ಎಂಬುವರು ತಮ್ಮ ಕನಸಿನ ಮನೆಗೆ ವಾಜಪೇಯಿ ನಿವಾಸ ಎಂದು ಹೆಸರಿಟ್ಟಿದ್ದಾರೆ. ಸ್ಥಳೀಯ ಸಾರ್ವಜನಿಕರ ಸಮ್ಮುಖದಲ್ಲಿ ನಾಮಫಲಕ ಉದ್ಘಾಟಿಸಿದರು. ನಂತರ ಪುಷ್ಪಗಳಿಂದ ಅಲಂಕಾರಗೊಂಡ ಅಟಲ್ ಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನೂತನ ನಿವಾಸದ ಉದ್ಘಾಟನೆಯಲ್ಲಿ ಪಾಲ್ಗೊಂಡವರಿಗೆ ಸಿಹಿ ಹಂಚಿದರು. ವೃತ್ತಿಯಲ್ಲಿ ಕಾರ್ ಡ್ರೈವರ್ ವೀರಭದ್ರಪ್ಪ ಇವರು, ಹದಗೆಟ್ಟ ರಸ್ತೆಗಳಿಂದ ಬೇಸತ್ತಿದ್ದ ಸಂದರ್ಭದಲ್ಲಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ವೇಳೆ ದೇಶಾದ್ಯಂತ ಚತುಷ್ಪತ ರಸ್ತೆ, ಗ್ರಾಮ ಸಡಕ್ ಯೋಜನೆಯಂತ ರಸ್ತೆ ಯೋಜನೆಗಳನ್ನ ಜಾರಿಗೆ ತಂದು ವಾಹನ ಚಾಲಕರಿಗೆ ಆಗುವ ತೊಂದರೆಗಳನ್ನ ನಿವಾರಿಸಿದ್ದರು. ಈ ಕಾರಣದಿಂದ ಮನೆಗೆ ವಾಜಪೇಯಿ ನಿವಾಸ ಎಂದು ಹೆಸರಿಟ್ಟಿದ್ದೇನೆ ಅಂತಿದ್ದಾರೆ ಕಾರ್ ಚಾಲಕ ವೀರಭದ್ರಪ್ಪ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments