Webdunia - Bharat's app for daily news and videos

Install App

ಮುಜರಾಯಿ ಅನುದಾನ ವಾಪಸ್ ಹಿಂಪಡೆಯಿರಿ ಎಂದ ಬಿಜೆಪಿ ಶಾಸಕ

Webdunia
ಶನಿವಾರ, 17 ನವೆಂಬರ್ 2018 (18:34 IST)
ಮುಜರಾಯಿ ಇಲಾಖೆ ಅನುದಾನ ಹಿಂಪಡೆಯಲು ಬಿಜೆಪಿ ಶಾಸಕ ಮನವಿ ಮಾಡಿಕೊಂಡು ಸಚಿವರಿಗೆ ಪತ್ರ ಬರೆದಿದ್ದಾರೆ.

ಹೊಸದುರ್ಗ ಶಾಸಕ ಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದು, ಬಂದ ಅನುದಾನ ವಾಪಸ್ಸು ಪಡೆಯುವಂತೆ ಪತ್ರ ಬರೆದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪತ್ರ ಬರೆದಿದ್ದು, ದೇಗುಲ ಅಭಿವೃದ್ಧಿಗೆ‌ 8ಲಕ್ಷ‌ ರೂ‌. ಬಿಡುಗಡೆ ಮಾಡಿರುವ ಮುಜರಾಯಿ ಇಲಾಖೆ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಜರಾಯಿ ಇಲಾಖೆ ಸಚಿವ ರಾಜಶೇಖರ ಬಿ. ಪಾಟೀಲ್ ಅವರಿಗೆ ಪತ್ರ ಬರೆದ ಶಾಸಕ ಶೇಖರ್, ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ.

ಕೇವಲ‌ 8 ಲಕ್ಷ ರೂ.‌ ಅನುದಾನವನ್ನು ಮಂಜೂರು ಮಾಡಿದ್ದಕ್ಕೆ ಗೂಳಿಹಟ್ಟಿ ಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ. ಈ‌ ಅನುದಾನ ನಮ್ಮ ತಾಲೂಕಿಗೆ ಬಹಳ‌ ದೊಡ್ಡದಾಯಿತು. ಸಿಎಂ ಅಥವಾ ಮುಜರಾಯಿ ಸಚಿವರ ಕ್ಷೇತ್ರದಲ್ಲಿ ಈ ಅನುದಾನ ಬಳಕೆ ಮಾಡಿಕೊಳ್ಳಿ. ನಾನು‌ ಬಂದು ಹಣ್ಣು ಕಾಯಿ ತಂದು ಪೂಜೆ‌ ಮಾಡಿಸಿ ದೇವರ ಆಶೀರ್ವಾದ ಪಡೆಯುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

ಹಳೇಕುಂದೂರು ಗ್ರಾಮದ ಆಂಜನೇಯ ಸ್ವಾಮಿ ದೇಗುಲಕ್ಕೆ ಮಂಜೂರಾಗಿದ್ದ ಅನುದಾನವನ್ನು ಹಿಂಪಡೆದುಕೊಳ್ಳುವಂತೆ ಪತ್ರ ಬರೆದಿದ್ದಾರೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನೇಹಾ ಹಂತಕ ಫಯಾಜ್ ಕತೆ ಏನಾಗಿದೆ ನೋಡಿ

ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ಬರೋಬ್ಬರಿ ₹1.3ಕೋಟಿ ಮೌಲ್ಯದ ಎಲೆಕ್ಟ್ರಿಕ್ ಬಸ್ ಕೊಡುಗೆ

ರಾಜ್ಯದ ಪ್ರವಾಹ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಲು ದಿಟ್ಟ ನಿರ್ಧಾರ ಕೈಗೊಂಡ ನಿಖಿಲ್‌

ಧರ್ಮಸ್ಥಳ ಬುರುಡೆ ರಹಸ್ಯದಲ್ಲಿ ಮಹತ್ವದ ಬೆಳವಣಿಗೆ, ಎಸ್‌ಐಟಿ ತನಿಖೆಗೆ ಹಾಜರಾದ ಉದಯ್ ಜೈನ್‌

ರಣಮಳೆಗೆ ನರಕಸದೃಶವಾದ ಹಿಮಾಚಲ ಪ್ರದೇಶ‌: ಸಾವಿರಾರು ರಸ್ತೆಗಳ ಸಂಪರ್ಕ ಕಡಿತ

ಮುಂದಿನ ಸುದ್ದಿ
Show comments