Publish Date: Fri, 26 Oct 2018 (18:21 IST)
Updated Date: Fri, 26 Oct 2018 (18:24 IST)
ಬಳ್ಳಾರಿ ಜಿಲ್ಲೆಯ ಉಪ ಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ಜೆ. ಶಾಂತ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಯುತ್ತಿದೆ. ವಿ. ಸೋಮಣ್ಣ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಸಂಗನಕಲ್ಲು ಗ್ರಾಮದ ಸಮಾಜದ ಮುಖಂಡರ ಮನೆಯಲ್ಲಿ ಆ ಭಾಗದ ಎಲ್ಲಾ ಹಿರಿಯರ ಸಮ್ಮುಖದಲ್ಲಿ ಸಭೆ ನಡೆಸಿದರು.
ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕೆಂದು ಮತಯಾಚಿಸಿದರು. ಈ ಸಂದರ್ಭದಲ್ಲಿ ನಾಗಭೂಷಣ್ ಗೌಡ ಗ್ರಾಮಾಂತರ ಕ್ಷೇತ್ರದ ಮುಖಂಡರು, ಗುರುಲಿಂಗನಗೌಡ ರೈತ ಮೋರ್ಚಾ ಉಪಾಧ್ಯಕ್ಷರು, ವಿರುಪಾಕ್ಷಿ ಗೌಡ ಮಾಜಿ ಜಿಲ್ಲಾ ಅಧ್ಯಕ್ಷರು, ರಾಜಶೇಖರ್ ಗೌಡ ರಾಜ್ಯ ಕರ್ಯಕಾರಿಣಿ ಸದಸ್ಯರು, ತಿಮ್ಮನಗೌಡರು, ವೀರೆಶ್, ಕಟ್ಟೆಗೌಡ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ತೀವ್ರ ಕುತೂಹಲ ಕೆರಳಿಸಿರುವ ಉಪಚುನಾವಣೆಯಲ್ಲಿ ಬಿಜೆಪಿ ಮುಖಂಡರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.