Select Your Language

Notifications

webdunia
webdunia
webdunia
webdunia

ಪಠ್ಯದಲ್ಲಿ ಎಲ್ಲವನ್ನೂ ಸೇರಿಸಿದ್ದೇವೆ ಆದಾಗ್ಯೂ ಅನಗತ್ಯ ವಿವಾದ

ಪಠ್ಯದಲ್ಲಿ ಎಲ್ಲವನ್ನೂ ಸೇರಿಸಿದ್ದೇವೆ ಆದಾಗ್ಯೂ ಅನಗತ್ಯ ವಿವಾದ
bengaluru , ಬುಧವಾರ, 1 ಜೂನ್ 2022 (15:43 IST)
ಹುಬ್ಬಳ್ಳಿ: ಪಠ್ಯ ಪುಸ್ತಕ ನೋಡದೇ ವಿವಾದ ಸೃಷ್ಟಿಸಲಾಗುತ್ತಿದೆ. ಬಿಜೆಪಿ ವಿಚಾರಧಾರೆಯನ್ನು ಜನ ಒಪ್ಪುತ್ತಿರುವುದರಿಂದ ಮಹಾಪುರುಷರ ಹೆಸರಿನಲ್ಲಿ ಕೆಲವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಅವರು ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿ, ಇದೊಂದು ರೀತಿಯಲ್ಲಿ ಅಸಹಿಷ್ಣುತೆಯನ್ನು ಸೃಷ್ಟಿಸಲಾಗುತ್ತಿದೆ. ನಾವು ಏನೇ ಮಾಡಿದರೂ ವಿವಾದ ಸೃಷ್ಟಿಸಲಾಗುತ್ತಿದೆ. ಬಡವರಿಗೆ ಮನೆ, ದುಡ್ಡು ಕೊಟ್ಟರೂ ವಿವಾದ ಸೃಷ್ಟಿಸುತ್ತರೆ. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ ಎಲ್ಲವನ್ನೂ ಸೇರಿಸಲಾಗಿದೆ ಎಂದರು.
ಜೊತೆಗೆ ಈ ಹಿಂದೆ ಬಿಟ್ಟಿದ್ದ ವಿಷಯವನ್ನು ಸೇರ್ಪಡೆ ಮಾಡಲಾಗಿದೆ. ಆದಾಗ್ಯೂ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಮೊದಲು ಅನಗತ್ಯ ವಿವಾದ ಸೃಷ್ಟಿಸುತ್ತಿರುವವರು ಪುಸ್ತಕ ನೋಡಿ ಮಾತನಾಡಿ ಎಂದು ಸಚಿವ ಜೋಷಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಗಾರಿನಲ್ಲಿ ದೇಶದಲ್ಲಿ ಈ ಹಿಂದೆ ಊಹಿಸಿದಕ್ಕಿಂತ ಹೆಚ್ಚಿನ ಮಳೆ