Select Your Language

Notifications

webdunia
webdunia
webdunia
webdunia

ಕೇಂದ್ರ ಬಜೆಟ್-2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂಡದ ಪರಿಚಯ

ಕೇಂದ್ರ ಬಜೆಟ್-2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಂಡದ ಪರಿಚಯ
bangalore , ಗುರುವಾರ, 20 ಜನವರಿ 2022 (20:37 IST)
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಸೃಷ್ಟಿಸಿರುವ ಆರ್ಥಿಕ ಸವಾಲುಗಳ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 2022-2023 ಸಾಲಿನ ಕೇಂದ್ರೀಯ ಬಜೆಟ್ ಅನ್ನು ಮಂಡಿಸಲಿದ್ದಾರೆ.
ಕೇಂದ್ರ ಸರ್ಕಾರ ಈ ಬಾರಿ ಮಂಡಸಲಿರುವ ಬಜೆಟ್ ಹಿಂದೆಂದಿಗಿಂತಲೂ ವಿಭಿನ್ನ ಮತ್ತು ವಿಶೇಷವಾಗಿರಲಿದೆ.
ಹಣಕಾಸಿನ ಕಾಳಜಿಯನ್ನು ಬದಿಗಿಟ್ಟು ಸಾರ್ವಜನಿಕ ಖರ್ಚು, ಬೇಡಿಕೆ ಹೆಚ್ಚಿಸುವ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ. ದೇಶದ ಆರ್ಥಿಕತೆಗೆ ಮುಷ್ಠಿ ನೀಡುವ ಉದ್ದೇಶದಿಂದ ಬಜೆಟ್ ರಚಿಸುವಲ್ಲಿ ಸಚಿವರಿಗೆ ಹಲವು ಸಲಹೆಗಾರರು ಮತ್ತು ಕಾರ್ಯದರ್ಶಿಗಳು ತಂಡವು ಸಹಾಯ ಮಾಡುತ್ತಿದ್ದಾರೆ.
 
ಬಜೆಟ್‌ 2022: ಜಾಗತಿಕ ಸಾಲ ಹೂಡಿಕೆದಾರರಿಗೆ ತೆರಿಗೆ ವಿನಾಯಿತಿ ಸಿಗುತ್ತಾ..?
2022-23ನೇ ಸಾಲಿನ ಕೇಂದ್ರ ಬಜೆಟ್ ರಚನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಸರ್ಕಾರದ ಹಿಂದಿರುವ ಶಕ್ತಿ ಏನು. ಸಲಹೆ ಸೂಚನೆಗಳನ್ನು ನೀಡುವ ವಿಶೇಷ ತಂಡದಲ್ಲಿ ಇರುವವರು ಯಾರು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.
 
ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್:
ಮಾಜಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಮತ್ತು ಈಗ ಕಂದಾಯ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸುತ್ತಿರುವ ತರುಣ್ ಬಜಾಜ್ ಅವರಿಗೆ ಆಡಳಿತ ಮತ್ತು ಸಾರ್ವಜನಿಕ ನೀತಿಯಲ್ಲಿ 31 ವರ್ಷಗಳ ಅನುಭವವಿದೆ. ಹಣಕಾಸು ಮತ್ತು ಉದ್ಯಮದ ಕ್ಷೇತ್ರಗಳಲ್ಲಿ ನಿಕಟವಾಗಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಹಣಕಾಸು ಸಚಿವಾಲಯಕ್ಕೂ ಮೊದಲು ಪ್ರಧಾನಮಂತ್ರಿ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸಿದ್ದು, ಉದ್ಯಮದೊಂದಿಗೆ ನಿಯಮಿತ ಸಂವಹನ ನಡೆಸುತ್ತಿದ್ದರು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಅವರು ಮಾಡಿದ ಮೊದಲ ಕೆಲಸವೆಂದರೆ ಭಾರತದ ಸಾಲವನ್ನು 12 ಲಕ್ಷ ಕೋಟಿಗೆ ಹೆಚ್ಚಿಸುವುದು ಆಗಿದೆ. ಇದಲ್ಲದೇ ಬೆಳವಣಿಗೆ ಹೆಚ್ಚಿಸುವ ಹಣದ ಹೂಡಿಕೆಗಾಗಿ ಆದ್ಯತೆ ಕ್ಷೇತ್ರಗಳನ್ನು ಗುರುತಿಸುವುದೇ ಮೊದಲ ಕಾರ್ಯವಾಗಿದೆ.
 
ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್:
ಭಾರತದ ಜಿಡಿಪಿಯಲ್ಲಿ ಬೆಳವಣಿಗೆ ಕಾಪಾಡಿಕೊಳ್ಳಲು ಆರ್ಥಿಕತೆಯಲ್ಲಿ ಖಾಸಗಿ ಬಂಡವಾಳ ವೆಚ್ಚ ಪುನರುಜ್ಜೀವನಗೊಳಿಸುವ ಕಠಿಣ ಕೆಲಸವನ್ನು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ವಹಿಸಿಕೊಳ್ಳುತ್ತಾರೆ. ಕೊವಿಡ್-19 ಸಾಂಕ್ರಾಮಿಕದ ನಂತರ, ಕೇಂದ್ರ ಸರ್ಕಾರವು ಬಂಡವಾಳ ಹೂಡಿಕೆಯ ಹಿಂದಿನ ಪ್ರೇರಕ ಶಕ್ತಿಯಾಗಿದೆ. ವಿಶೇಷವಾಗಿ ಮೂಲಸೌಕರ್ಯದಲ್ಲಿ ಚಟುವಟಿಕೆ ಪುನರುಜ್ಜೀವನ ಮತ್ತು ಉದ್ಯೋಗಗಳ ಸೃಷ್ಟಿ ಗುರಿಯನ್ನು ಹೊಂದಿದೆ. ಸೇಠ್ ಅವರೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣವನ್ನು ರಚಿಸುವ ಸಾಧ್ಯತೆಯಿದೆ.
 
ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್:
ಹಿರಿಯ ಕಾರ್ಯದರ್ಶಿ ಎನಿಸಿರುವ ಟಿ.ವಿ.ಸೋಮನಾಥನ್ ಹಣಕಾಸು ಕಾರ್ಯದರ್ಶಿ ಸ್ಥಾನವನ್ನು ಹೊಂದಿದ್ದಾರೆ. ಸೋಮನಾಥನ್ ಹಣಕಾಸು ಸಚಿವಾಲಯಕ್ಕಿಂತ ಮೊದಲು ಪ್ರಧಾನಿ ಸಚಿವಾಲಯದಲ್ಲೂ ಕೆಲಸ ಮಾಡಿದ್ದಾರೆ. ಸೋಮನಾಥನ್ ಮತ್ತು ಬಜಾಜ್ ಇಬ್ಬರೂ ಪರಿಸ್ಥಿತಿಯ ಮಿಡಿತವನ್ನು ಅರಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಸಾಂಕ್ರಾಮಿಕ ರೋಗದಿಂದ ಹೊಡೆದ ನಂತರ ತೆರಿಗೆ ಸಂಗ್ರಹಣೆ ಹಣ ಉಳಿಸಲು ಸೋಮನಾಥನ್ ವರ್ಷದ ಆರಂಭದಲ್ಲಿ ಖರ್ಚಿಗೆ ನಿರ್ಬಂಧಗಳನ್ನು ವಿಧಿಸಿದರು. ಆದರೆ ಸರ್ಕಾರದ ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅನ್ನು ನೀಡಲಾಗಿದೆ, FY21 ವಾಸ್ತವಿಕ ವೆಚ್ಚವು ಬಜೆಟ್ ಅಂದಾಜುಗಳನ್ನು ಮೀರಬಹುದು ಎಂದು ನಂಬಲಾಗಿದೆ.
ಜಿಡಿಪಿಯ ಶೇಕಡಾವಾರು ಆರೋಗ್ಯ ವೆಚ್ಚ ಹೆಚ್ಚಿಸುವುದು ಮತ್ತು ಇನಾಕ್ಯುಲೇಷನ್‌ಗೆ ಹಣ ಮೀಸಲಿಡುವುದು ಮೊದಲ ಕಾರ್ಯವಾಗಿದೆ. ಎಲ್ಲ ವಿವರಗಳನ್ನು ಒದಗಿಸುವ ಮೂಲಕ ಕೊರತೆ ಸಂಖ್ಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು ಅವರ ಮುಂದಿನ ದೊಡ್ಡ ಸವಾಲಾಗಿದೆ.
 
ಬ್ಯಾಂಕಿಂಗ್ ಕಾರ್ಯದರ್ಶಿ ದೇಬಶಿಶ್ ಪಾಂಡಾ:
ಯುಪಿ ಕೇಡರ್‌ನ 1987ರ ಬ್ಯಾಚ್ ಐಎಎಸ್ ಅಧಿಕಾರಿಯೇ ಬ್ಯಾಂಕಿಂಗ್ ಕಾರ್ಯದರ್ಶಿ ದೇಬಶಿಶ್ ಪಾಂಡಾ. ಪಾಂಡಾ RBI ಜೊತೆಗೆ YES ಬ್ಯಾಂಕ್ ಮತ್ತು ಲಕ್ಷ್ಮಿ ವಿಲಾಸ್ ಬ್ಯಾಂಕ್ ಎರಡಕ್ಕೂ ತ್ವರಿತ ಪರಿಹಾರವನ್ನು ಕಂಡುಹಿಡಿಯುವ ಕಾರ್ಯವನ್ನು ನಿರ್ವಹಿಸಿದರು. ಸಾಂಕ್ರಾಮಿಕ ರೋಗದ ನಂತರ, ಪಾಂಡಾ ಈಗ ತುರ್ತಾಗಿ ಆರ್ಥಿಕ ವಲಯದ ಸುಧಾರಣೆಗಳತ್ತ ಗಮನ ಹರಿಸಬೇಕಾಗಿದೆ. ಆರ್‌ಬಿಐ ಕಡ್ಡಾಯ ಸಡಿಲಿಕೆ ನಂತರ, ಹೆಚ್ಚಿನ ಬ್ಯಾಂಕ್‌ಗಳು ಎನ್‌ಪಿಎಗಳಲ್ಲಿ ಏರಿಕೆ ಕಂಡಿವೆ. 2021ರ ಬಜೆಟ್‌ನಲ್ಲಿ ಪಾಂಡಾಗೆ ಬ್ಯಾಂಕ್‌ಗಳ ಮರುಬಂಡವಾಳೀಕರಣಕ್ಕೆ ಸಾಕಷ್ಟು ಹಣದ ಅಗತ್ಯವಿದೆ. ಖಾಸಗೀಕರಣದ ಮೂಲಕ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಭವಿಷ್ಯ ರೂಪಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಾರೆ. ದುರ್ಬಲ ಬ್ಯಾಂಕ್‌ಗಳು ಖಾಸಗೀಕರಣದ ಅಭ್ಯರ್ಥಿ ಎಂದು ಎಫ್‌ಎಂ ಸೀತಾರಾಮನ್ ಈಗಾಗಲೇ ಸೂಚಿಸಿದ್ದಾರೆ.
 
ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿ ತುಹಿನ್ ಪಾಂಡೆ:
ತುಹಿನ್ ಪಾಂಡೆ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿಯಾಗಿದ್ದಾರೆ. ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಯಶಸ್ಸಿನ ನಂತರ, ಭಾರತ್ ಪೆಟ್ರೋಲಿಯಂ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಪಾನ್ ಹ್ಯಾನ್ಸ್ ಸೇರಿದಂತೆ 2021-22ರ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಐದರಿಂದ ಆರು ಕಂಪನಿಗಳನ್ನು ಖಾಸಗೀಕರಣಗೊಳಿಸಲಿದೆ ಎಂದು ತುಹಿನ್ ಹೇಳಿದ್ದರು. ಕೇಂದ್ರದ ಮಹತ್ವಾಕಾಂಕ್ಷೆಯ ಖಾಸಗೀಕರಣ ಯೋಜನೆ ಪ್ರಾರಂಭಿಸಿದ ನಂತರ ಪಾಂಡೆ, ಇನ್ನೂ ಯಾವುದೇ ಒಪ್ಪಂದಗಳನ್ನು ಕೈಗೊಳ್ಳುವ ಮತ್ತು ಅವುಗಳ ಪರಿಣಾಮವನ್ನು ಖಾತ್ರಿಪಡಿಸಿಕೊಳ್ಳುವ ಜವಾಬ್ದಾರಿ ಹೊಂದಿರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಮತ್ತೆ ಕೊರೊನಾ ಸ್ಪೋಟ : ಒಂದೇ ದಿನ 3,17,532 ಕೇಸ್ ಪತ್ತೆ, 491 ಮಂದಿ ಸಾವು