Select Your Language

Notifications

webdunia
webdunia
webdunia
webdunia

ನದಿಗೆ ಹಾರಿ ಆತ್ಮಹತ್ಯೆಗೆ‌ ಶರಣಾದ ಇಬ್ಬರು ವಿದ್ಯಾರ್ಥಿನಿಯರು

ನದಿಗೆ ಹಾರಿ ಆತ್ಮಹತ್ಯೆಗೆ‌ ಶರಣಾದ ಇಬ್ಬರು ವಿದ್ಯಾರ್ಥಿನಿಯರು
bangalore , ಶನಿವಾರ, 30 ಜುಲೈ 2022 (11:05 IST)
ಬೆಂಗಳೂರು ಹೊರವಲಯದ  ಹೊಸಕೋಟೆ ಹಾಗೂ ಆನೇಕಲ್ ತಾಲ್ಲೂಕು ಮಧ್ಯಭಾಗದ ಮುಗಳೂರು ಗ್ರಾಮದಲ್ಲಿ ಹರಿಯುತ್ತಿರುವ ದಕ್ಷಿಣ ಪಿನಾಕಿನಿ ನದಿಗೆ ಇಬ್ಬರು ಕಾಲೇಜು ವಿದ್ಯಾರ್ಥಿಗಳು ನದಿಗೆ  ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 26 ರ ಮಂಗಳವಾರ ಲಕ್ಕೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ರಾಜೇಶ್ವರಿ (17), ಸುಪ್ರಿಯ (17) ನದಿಗೆ ಹಾರಿದ್ದರು, ಈ ಸಂಬಂದ ಅನುಗೊಂಡನಹಳ್ಳಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜುಲೈ 26 ರಂದೆ ರಾಜೇಶ್ವರಿ ಮೃತದೇಹ ಪತ್ತೆಯಾಗಿತ್ತು, ಮತ್ತೊಬ್ಬ ವಿದ್ಯಾರ್ಥಿನಿಗಾಗಿ ನಾಲ್ಕುದಿನಗಳಿಂದ ಹೊಸಕೋಟೆ ತಾಲೂಕು ಆಡಳಿತ ಮಂಡಳಿ, ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್, ಪೊಲಿಸ್ ಇಲಾಖೆ ತಂಡದ 80 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು, ಇಂದು ಘಟನಾ ಸ್ಥಳಕ್ಕೆ ಹೊಸಕೋಟೆ  ತಾಲೂಕು ದಂಡಾಧಿಕಾರಿ ಮಹೇಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಕಲಿ ದಾಖಲಾತಿ ಸೃಷ್ಟಿಸಿ ವಿದೇಶಿ ಪ್ರಜೆ ಆಕ್ರಮ ವಾಸ