Select Your Language

Notifications

webdunia
webdunia
webdunia
webdunia

ತ್ರಿವಳಿ ತಲಾಕ್ ಅಪರಾಧ– ಸಿಹಿ ತಿನಿಸಿ ಸಂಭ್ರಮಿಸಿದ ಮಾಜಿ ಶಾಸಕಿ

ತ್ರಿವಳಿ ತಲಾಕ್ ಅಪರಾಧ– ಸಿಹಿ ತಿನಿಸಿ ಸಂಭ್ರಮಿಸಿದ ಮಾಜಿ ಶಾಸಕಿ
ಧಾರವಾಡ , ಶುಕ್ರವಾರ, 29 ಡಿಸೆಂಬರ್ 2017 (16:00 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧದ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವುದರಿಂದ ಮಾಜಿ ಶಾಸಕಿ ಸೀಮಾ ಮಸೂತಿ ಅವರು ಮುಸ್ಲಿಂ ಮಹಿಳೆಯರಿಗೆ ಸಿಹಿ ತಿನಿಸಿ ಸಂಭ್ರಮಪಟ್ಟರು.
 
ಬಿಜೆಪಿ ಕಚೇರಿ ಎದುರು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಮುಸ್ಲಿಂ ಮಹಿಳೆಯರಿಗೆ ಧಾರವಾಡ ಪೇಡಾ ತಿನ್ನಿಸುವ ಮೂಲಕ ತ್ರಿವಳಿ ತಲಾಕ್ ರದ್ದುಪಡಿಸಿದ ವಿಧೇಯಕಕ್ಕೆ ಕೇಂದ್ರ ಸರ್ಕಾರದ ಅಂಗೀಕಾರ ಪಡೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು.
 
ಮುಸ್ಲಿಂ ಮಹಿಳೆಯರಿಗೆ ಇತರರಂತೆ ಸಮಾನವಾದ ಬದುಕು ಕಲ್ಪಿಸಲು ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದು ಮಾಡಿರುವುದು ದೇಶದಲ್ಲಿ ಒಳ್ಳೆಯ ನಿರ್ಧಾರ ಎಂದು ಮಾಜಿ ಶಾಸಕಿ ಸೀಮಾ ಮಸೂತಿ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೋ–ಆಪರೇಟಿವ್ ಬ್ಯಾಂಕುಗಳಿಲ್ಲ ಐಟಿ ವಿನಾಯಿತಿ– ಜೇಟ್ಲಿ