Select Your Language

Notifications

webdunia
webdunia
webdunia
webdunia

ಮತ್ತೆ ಬಾಲ ಬಿಚ್ಚಿದ ನಾಡದ್ರೋಹಿ ಎಂಇಎಸ್

ಮತ್ತೆ ಬಾಲ ಬಿಚ್ಚಿದ ನಾಡದ್ರೋಹಿ ಎಂಇಎಸ್
ಬೆಳಗಾವಿ , ಬುಧವಾರ, 28 ನವೆಂಬರ್ 2018 (19:11 IST)
ಮತ್ತೆ ಬಾಲ ಬಿಚ್ಚಿದ ನಾಡದ್ರೋಹಿ ಎಂಇಎಸ್ ಮುಖಂಡರು ಹೊಸ ಕ್ಯಾತೆ ಶುರುವಿಟ್ಟುಕೊಂಡಿದ್ದಾರೆ.

ಬೆಳಗಾವಿಯಲ್ಲಿ ಮಹಾಮೇಳಾವಾಗೆ ಎಂಇಎಸ್ ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ. ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವಾಗೆ ನಿರ್ಧಾರ ಮಾಡಲಾಗಿದೆ.

ನಾವು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಬೆಳಗಾವಿ ಮಹಾರಾಷ್ಟ್ರ ಸೇರಿಸಬೇಕೆಂದು ನಮ್ಮ ಬೇಡಿಕೆಯಿದೆ. ಈಗಾಗಲೇ ಗಡಿ ವಿಚಾರ ಸುಪ್ರೀಂಕೋರ್ಟನಲ್ಲಿದೆ. ಗಡಿ ವಿವಾದ ಇನ್ನೂ ಇತ್ಯರ್ಥವಾಗಿಲ್ಲಾ. ಅದಕ್ಕೂ ಮುಂಚೆ ಕರ್ನಾಟಕ ಸರ್ಕಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಮಾಡುತ್ತಿದೆ. ಬೆಳಗಾವಿ ಅಧಿವೇಶನಕ್ಕೆ ನಾವು ವಿರೋಧಿಸಿ ಮಹಾಮೇಳಾವಾ ಮಾಡುತ್ತಿದ್ದೇವೆ ಎಂದು ಎಂಇಎಸ್ ಮುಖಂಡರು ಹೇಳಿಕೊಳ್ಳುತ್ತಿದ್ದಾರೆ.

ಮೇಳಾವಾಗೆ ಅನುಮತಿ ನೀಡುವಂತೆ ಜಿಲ್ಲಾಡಳಿತ, ಪೊಲೀಸ್ ಕಮೀಷನರ್ ಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಮಹಾ ಮೇಳಾವಾಗೆ ಮಹಾರಾಷ್ಟ್ರ ಎಲ್ಲಾ ಪಕ್ಷದ ನಾಯಕರಿಗೆ ಆಹ್ವಾನ ನೀಡಲಾಗಿದೆ. ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎನ್.ಸಿ.ಪಿ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಮಹಾ ನಾಯಕ ಗೋಪಿನಾಥ್ ಮುಂಡೆ ಬರುವ ಸಾಧ್ಯತೆಯೂ ಇದೆ.
ಚಳಿಗಾಲ ಅಧಿವೇಶನದ ಮೊದಲ ದಿನವೇ ಮಹಾಮೇಳಾವಾಗೆ ಎಂಇಎಸ್ ಹುನ್ನಾರ ನಡೆಸಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕ್ ಭದ್ರತಾ ಸಿಬ್ಬಂದಿಯಿಂದ ಮಹಿಳೆಯರ ಮೇಲೆ ದೌರ್ಜನ್ಯ