Publish Date: Tue, 03 Mar 2026 (10:12 IST)
Updated Date: Tue, 03 Mar 2026 (10:15 IST)
ಬೆಂಗಳೂರು: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಕದನ ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ಅಲ್ಲೋಕಲ್ಲೋಲವಾಗಿಸಿದೆ. ಈ ಉದ್ವಿಗ್ನತೆಯ ಪರಿಣಾಮ ಕರ್ನಾಟಕದ ಮೇಲೂ ತಟ್ಟಲಿದೆ. ಟಾಪ್ 4 ಅಂಶಗಳು ಇಲ್ಲಿವೆ.
ತೈಲ ಬೆಲೆ ಏರಿಕೆ
ತೈಲ ಬೆಲೆ ಏರಿಕೆ ಇಡೀ ದೇಶದಲ್ಲೇ ಪರಿಣಾಮ ಬೀರಲಿದೆ. ಇದಕ್ಕೆ ಕರ್ನಾಟಕವೂ ಹೊರತಲ್ಲ. ರಾಜ್ಯದಲ್ಲಿ ಈಗಾಗಲೇ ಪೆಟ್ರೋಲ್ ದರ ಸರಾಸರಿ 102 ರೂ. ದಾಟಿದೆ. ಇದು ಇನ್ನಷ್ಟು ಹೆಚ್ಚಾಗಬಹುದು.
ಪ್ರಯಾಣಿಕರ ಸಂಕಷ್ಟ
ಕರ್ನಾಟಕದಿಂದ ಎಷ್ಟೋ ಜನ ವಿದ್ಯಾಭ್ಯಾಸ, ಉದ್ಯೋಗ ನಿಮಿತ್ತ ಗಲ್ಫ್ ರಾಷ್ಟ್ರಗಳಿಗೆ ತೆರಳುವ ತಯಾರಿಯಲ್ಲಿರುತ್ತಾರೆ. ಇಂತಹವರ ಭವಿಷ್ಯ ಈಗ ಅಂತತ್ರ ಸ್ಥಿತಿಗೆ ತಲುಪಲಿದೆ. ಯುದ್ಧದ ವಾತಾವರಣದಿಂದಾಗಿ ಹಲವು ವಿಮಾನಗಳು ರದ್ದಾಗಿದ್ದು ಕೆಲಸ ಕಾರ್ಯಗಳು ಅರ್ಧಕ್ಕೇ ಸ್ಥಗಿತವಾಗಲಿದೆ.
ಐಟಿ ಉದ್ಯಮಕ್ಕೆ ಪೆಟ್ಟು
ಕರ್ನಾಟಕದ ರಾಜಧಾನಿ ಬೆಂಗಳೂರು ಐಟಿ-ಬಿಟಿ ನಗರ ಎಂದೇ ಹೆಸರುವಾಸಿ. ಇಲ್ಲಿನ ಎಷ್ಟೋ ಐಟಿ ಕಂಪನಿಗಳ ಮೂಲ ವಿದೇಶಗಳದ್ದು. ವಿದೇಶಿ ಮೂಲದ ಕಂಪನಿಗಳಿಗೆ ಆರ್ಥಿಕವಾಗಿ ಹೊಡೆತ ಬಿದ್ದರೆ ಅವುಗಳ ಪರಿಣಾಮ ಇಲ್ಲಿಯೂ ನೌಕರರ ಲೇ ಆಫ್, ವೇತನ ಕಡಿತ ಇತ್ಯಾದಿಗಳಿಗೆ ಕಾರಣವಾಗಬಹುದು.
ಸರಕು ಸಾಗಣೆಗೆ ಸಮಸ್ಯೆ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮುಂತಾದ ಕಡೆಯಿಂದ ಗಲ್ಫ್ ರಾಷ್ಟ್ರಗಳ ಜೊತೆ ನೇರವಾಗಿ ಸರಕು ಸಾಗಣೆ ಸಂಬಂಧವಿದೆ. ಇವುಗಳಲ್ಲಿ ವ್ಯತ್ಯಯ ಕಂಡುಬಂದು ಕೆಲವೊಂದು ಉದ್ಯಮಗಳಿಗೆ ಹೊಡೆತ ಬೀಳಲಿದೆ. ಕಾಮಗಾರಿಗಳು ಅರ್ಧಕ್ಕೇ ನಿಲ್ಲಬಹುದು. ಅಥವಾ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಬಹುದು.