Select Your Language

Notifications

webdunia
webdunia
webdunia
webdunia

‘ಕೆಜಿಎಫ್-2’ಗೆ ಹೆದರಿದ ಟಾಲಿವುಡ್​

‘ಕೆಜಿಎಫ್-2’ಗೆ ಹೆದರಿದ ಟಾಲಿವುಡ್​
bangalore , ಬುಧವಾರ, 20 ಏಪ್ರಿಲ್ 2022 (19:04 IST)
‘ಕೆಜಿಎಫ್ ಚಾಪ್ಟರ್-2’ ಸಿನಿಮಾ ಅಬ್ಬರಕ್ಕೆ ಭಾರತೀಯ ಚಿತ್ರರಂಗವೇ ಒಮ್ಮೆ ಶೇಕ್ ಆಗಿದೆ. ‘ಕೆಜಿಎಫ್ 2’ ಬರುವ ಅಬ್ಬರ ನೋಡಿಯೇ ‘ಜೆರ್ಸಿ’ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಈ ವಾರ ತೆರೆಗೆ ಬರುವ ಚಿತ್ರಗಳು ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡು ಸೈಲೆಂಟ್ ಆಗಿವೆ. ಏಪ್ರಿಲ್ 22ರಂದು ತೆಲುಗಿನಲ್ಲಿ ವಿಶ್ವಕ್ ಸೇನ್ ಅವರ ‘ಅಶೋಕ ವನಂಲೋ ಅರ್ಜುನ ಕಲ್ಯಾಣಂ ಹಾಗೂ ನಾಗ ಶೌರ್ಯ ಅವರ ‘ಕೃಷ್ಣ ವೃಂದ ವಿಹಾರಿ’ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಈ ಎರಡೂ ಚಿತ್ರಗಳು ಈಗ ರಿಲೀಸ್ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ಈಗಾಗಲೇ ‘ಅಶೋಕ ವನಂಲೋ ಅರ್ಜುನ ಕಲ್ಯಾಣಂ’ ಸಿನಿಮಾದ ರಿಲೀಸ್ ದಿನಾಂಕವನ್ನು ಮೇ 6ಕ್ಕೆ ಮುಂದೂಡಿರುವ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ‘ಕೃಷ್ಣ ವೃಂದ ವಿಹಾರಿ’ಕೂಡ ಇದೇ ಆಲೋಚನೆಯಲ್ಲಿದ್ದು, ಈ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ದಿವ್ಯಾಗೂ ಬಿಜೆಪಿ ನಾಯಕರಿಗೂ ಸಂಪರ್ಕವಿದೆ'