Select Your Language

Notifications

webdunia
webdunia
webdunia
webdunia

ಸಚಿನ್ ತೆಂಡುಲ್ಕರ್ ಆರು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ್ದ ಸಂಪೂರ್ಣ ಸಂಬಳ ಹಾಗೂ ಭತ್ಯೆಯನ್ನು ನೀಡಿದ್ದು ಯಾರಿಗೆ…?

ಸಚಿನ್ ತೆಂಡುಲ್ಕರ್  ಆರು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ್ದ ಸಂಪೂರ್ಣ ಸಂಬಳ ಹಾಗೂ ಭತ್ಯೆಯನ್ನು ನೀಡಿದ್ದು ಯಾರಿಗೆ…?
ನವದೆಹಲಿ , ಸೋಮವಾರ, 2 ಏಪ್ರಿಲ್ 2018 (07:00 IST)
ನವದೆಹಲಿ : ಇಂದಿನ ಕಾಲದಲ್ಲಿ ಬೇರೆಯವರ ಹಣಕ್ಕಾಗಿ ಬಾಯಿ ಬಿಡುವ ಜನರಿರುವಾಗ ರಾಜ್ಯ ಸಭಾ ಸದಸ್ಯ, ಟೀಂ ಇಂಡಿಯಾದ ಮಾಜಿ ನಾಯಕ ಸಚಿನ್ ತೆಡುಲ್ಕರ್ ಅವರು ತಮ್ಮ ಆರು ವರ್ಷಗಳ ಅವಧಿಯಲ್ಲಿ ಸರ್ಕಾರ ನೀಡಿದ್ದ ಸಂಪೂರ್ಣ ಸಂಬಳ ಹಾಗೂ ಭತ್ಯೆಯನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.


ಇತ್ತೀಚೆಗೆ ರಾಜ್ಯಸಭಾ ಸದಸ್ಯ ಅವಧಿ ಮುಗಿಸಿದ ಸಚಿನ್ ತೆಂಡೂಲ್ಕರ್ ಅವರು ತಮ್ಮ ಈ ಅವಧಿಯಲ್ಲಿ ಸುಮಾರು 90 ಲಕ್ಷ ರೂ. ಹಣವನ್ನು ವೇತನ ಹಾಗೂ ಭತ್ಯೆ ರೂಪದಲ್ಲಿ ಪಡೆದಿದ್ದರು. ಆದರೆ ಅದನ್ನು ಅವರು ತಾವು ಉಪಯೋಗಿಸದೆ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಸಚಿನ್ ಅವರ ಈ ನಿರ್ಧಾರದ ಕುರಿತು ಪ್ರಧಾನಿಗಳ ಕಾರ್ಯಾಲಯ ಸಚಿನ್ ಅವರಿಗೆ ಪತ್ರವೊಂದರ ಮೂಲಕ ಗೌರವ ಸೂಚಿಸುವುದರ ಜೊತೆಗೆ ತಾವು ನೀಡಿದ ಹಣವನ್ನು ಕಷ್ಟದಲ್ಲಿ ಇರುವ ಪ್ರಜೆಗಳಿಗೆ ವಿನಿಯೋಗಿಸುವುದಾಗಿ ತಿಳಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪಕ್ಷದ ಹಾಲಿ ಶಾಸಕನ ವಿರುದ್ಧ ಬಂಡಾಯವೆದ್ದ ಕಾಂಗ್ರೆಸ್ಸಿಗರು